ನೀರು ಹರಿಯುವ ತೋಡಿಗೆ ಬಿದ್ದು ಮೃತ್ಯು

Update: 2019-06-20 17:09 GMT

ಬ್ರಹ್ಮಾವರ, ಜೂ.20: ಮಳೆಗಾಲದ ನೀರು ಹರಿಯುವ ತೊಡಿಗೆ ಆಕಸ್ಮಿಕ ವಾಗಿ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೂರು ಎಂಬಲ್ಲಿ ನಡೆದಿದೆ.

ಮೃತರನ್ನು ನಡೂರು ನಿವಾಸಿ ಅಕ್ಕಯ್ಯ (70) ಎಂದು ಗುರುತಿಸಲಾಗಿದೆ. ಇವರು ಇವರು ಜೂ.19ರ ಮಧ್ಯಾಹ್ನ 2:45 ಗಂಟೆಯಿಂದ ಜೂ.20ರ ಬೆಳಗ್ಗೆ 10ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಸಮೀಪ ತೊಡಿಗೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರೆನ್ನಲಾಗಿದೆ.

ನೀರಿನಲ್ಲಿ ತೇಲಿಕೊಂಡು ಬಂದ ಮೃತದೇಹವು ಕೂರಾಡಿ-ಕೂಂಟೂರು ಬಳಿ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News