ಕುಸಿದು ಬಿದ್ದು ಮೀನುಗಾರ ಮೃತ್ಯು
Update: 2019-06-20 17:11 GMT
ಗಂಗೊಳ್ಳಿ, ಜೂ.20: ಮೀನುಗಾರಿಕೆ ತೆರಳುವ ವೇಳೆ ದೋಣಿಯಲ್ಲೇ ಕುಸಿದು ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಜೂ.19ರಂದು ರಾತ್ರಿ ವೇಳೆ ಗಂಗೊಳ್ಳಿ ಉಪ್ಪಿನಕುದ್ರು ಕಳುವಿನ ಬಾಗಿಲು ಎಂಬಲ್ಲಿ ನಡೆದಿದೆ.
ಮೃತರನ್ನು ಕಳುವಿನ ಬಾಗಿಲು ನಿವಾಸಿ ಬಸವ ಖಾರ್ವಿ ಎಂಬವರ ಮಗ ಸಂತೋಷ ಖಾರ್ವಿ(38) ಎಂದು ಗುರುತಿಸಲಾಗಿದೆ. ಇವರು ಪಂಚ ಗಂಗಾವಳಿ ಹೊಳೆಗೆ ಮೀನುಗಾರಿಕೆಗೆ ಹೊರಡಲು ದೋಣಿ ಬಳಿ ಹೊಗುತ್ತಿರು ವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.