ಮೂಡುಬಿದಿರೆ : ವೃದ್ಧೆಯ ಸರ ಕಿತ್ತು ಪರಾರಿ

Update: 2019-06-20 17:21 GMT

ಮೂಡುಬಿದಿರೆ : ವೃದ್ಧೆಯೋರ್ವರ ಕುತ್ತಿಗೆಯಿಂದ ಸುಮಾರು ನಾಲ್ಕು ಪವನಿನ ಚಿನ್ನದ ಸರವನ್ನು ದುಷ್ಕರ್ಮಿ ಎಳೆದುಕೊಂಡು ಪರಾರಿಯಾದ ಘಟನೆ ಮೂಡುಬಿದಿರೆಯಲ್ಲಿ ಗುರುವಾರ  ನಡೆದಿದೆ.

ಪುರಸಭಾ ವ್ಯಾಪ್ತಿಯ ಲಾಡಿ ನಿವಾಸಿ 70ರ ಹರೆಯದ ಕಲ್ಯಾಣಿ ಚಿನ್ನದ ಸರವನ್ನು ಕಳೆದುಕೊಂಡವರು. ಕಲ್ಯಾಣಿ ಅವರು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಜ್ಯೋತಿನಗರದಿಂದ ಲಾವಾಂತಬೆಟ್ಟು ಮೂಲಕ ಒಳ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ  ಬೈಕ್‍ನಲ್ಲಿ ಬಂದ ವ್ಯಕ್ತಿ ಮಾನಾಡುವ ನೆಪ ಮಾಡಿ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದುಕೊಂಡು ಬೈಕ್‍ನಲ್ಲಿ ಪರಾರಿಯಾಗಿದ್ದಾನೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News