ಕೋಟೆಕಾರ್: ಜೂ. 21ರಂದು ಮದರಸ ಮೆಲಂತಸ್ತು ಉದ್ಘಾಟನೆ
Update: 2019-06-20 17:38 GMT
ಉಳ್ಳಾಲ: ಕೋಟೆಕಾರ್ ಹಿದಾಯತ್ ನಗರದಲ್ಲಿರುವ ಹಿಹ್ಸಾನುಲ್ ವಹ್ಹಾಬ್ ಅಲ್ ಮದರಸತುಲ್ ಹಿದಾಯ ಇದರ ಮೇಲಂತಸ್ತು ಉದ್ಘಾಟನಾ ಸಮಾರಂಭ ಜೂ. 21ರಂದು ಸಂಜೆ 4 ಗಂಟೆಗ ನಡೆಯಲಿದೆ.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉದ್ಘಾಟಿಸಲಿದ್ದಾರೆ. ಮದರಸ ಅಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಯು.ಟಿ.ಖಾದರ್, ಉದ್ಯಮಿ ಮುಹಮ್ಮದ್ ಸಾಗರ್, ಮಸೀದಿಯ ಖತೀದ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ, ಸದರ್ ಮುಅಲ್ಲಿಂ ಯು.ಎ.ಅಬ್ದುಲ್ ಅಝೀಝ್ ಸಖಾಫಿ, ಮುಅಲ್ಲಿಂ ಅಶ್ರಫ್ ಅಮ್ಜದಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.