ಜೂ. 23: ಹೊಸಂಗಡಿಯಲ್ಲಿ ‘ಗ್ರಾಂಡ್ ಆಡಿಟೋರಿಯಂ’ ಉದ್ಘಾಟನೆ

Update: 2019-06-21 14:55 GMT

ಮಂಗಳೂರು, ಜೂ.21: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಂಗಡಿ ಜಂಕ್ಷನ್ ಬಳಿ ನಿರ್ಮಾಣಗೊಂಡಿರುವ ‘ಗ್ರಾಂಡ್ ಆಡಿಟೋರಿಯಂ’ ಜೂ.23ರಂದು ಪೂರ್ವಾಹ್ನ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಅಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ‘ಗ್ರಾಂಡ್ ಆಡಿಟೋರಿಯಂ’ನ್ನು ಉದ್ಘಾಟಿಸಿ ದುಆ ಆಶೀರ್ವಚನ ನೀಡಲಿದ್ದಾರೆ. ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸೈಯದ್ ಎಂ.ಎ. ಅಥಾವುಲ್ಲಾ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಮತ್ತು ಅಸೈಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ಮಲ್‌ಹರ್ ಅವರು ನಮಾಝ್ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಕಾಣಿಲ ಶ್ರೀ ಭಗವತಿ ದೇವಸ್ಥಾನದ ಕನ್ನ ಕಲೆಕಾರ್ ಗೋಪಾಲ್ ದಾಸ್ ಡೈನಿಂಗ್ ಹಾಲ್ ಮತ್ತು ಸೆಕ್ರೇಡ್ ಹಾರ್ಟ್ ಆಫ್ ಜೋಸೆಫ್‌ನ ಪ್ರಧಾನ ಧರ್ಮಗುರು ಫಾ. ಫ್ರಾನ್ಸಿಸ್ ರೊಡ್ರಿಗಸ್ ಅವರು ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೇರಳದ ಕಂದಾಯ ಸಚಿವ ಇ. ಚಂದ್ರಶೇಖರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕಾಸರಗೋಡು ಸಂಸದ ರಾಜ್‌ಮೋಹನ್ ಉನ್ನಿತ್ತಾನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಯೆನೆಪೊಯ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ, ಕಾಸರಗೋಡು ಜಿಪಂ ಅಧ್ಯಕ್ಷ ಎಜಿಸಿ ಬಶೀರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ, ಮಂಜೇಶ್ವರ ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ, ಕರ್ನಾಟಕ ರಾಜ್ಯ ಸರಕಾರದ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಝೀಝ್ (ಮೈಸೂರು ಬಾವ), ಹಕೀಂ ಕುನ್ನಿಲ್, ಅಡ್ವಕೇಟ್ ಶ್ರೀಕಾಂತ್, ಬಿ.ವಿ.ರಾಜನ್, ಕೆ.ಆರ್.ಜಯಾನಂದ, ಹಾಜಿ ಎನ್.ಎಂ. ಅಬೂಬಕರ್, ಹಾಜಿ ಕೆ. ಅಬುಲ್ಲಾ (ಬಾವಾ), ಹಾಜಿ ವಿ.ಎಂ. ಅಬ್ದುಲ್ ಹಮೀದ್ (ಯಾಫ್ಕೊ), ಹಾಜಿ ಎಂ.ಎ. ಮುಹಮ್ಮದ್, ಹಾಜಿ ಹಸೈನಾರ್ ಕೂಡೇಲ್, ಹಾಜಿ ವಿ.ಕೆ. ಪೊಡಿಯಬ್ಬ, ನಿವೃತ್ತ ಸಬ್ ರಿಜಿಸ್ಟ್ರಾರ್ ಕೆ.ಎಂ. ಅಬ್ದುಲ್ ರಝಾಕ್ ಭಾಗವಹಿಸಲಿದ್ದಾರೆ.

ವಿಶೇಷತೆ

ಕಾಸರಗೋಡು ಜಿಲ್ಲೆಯ ಸಂಪೂರ್ಣ ಹವಾನಿಯಂತ್ರಿತದಿಂದ ಕೂಡಿದ ಮೂರು ಅಂತಸ್ತಿನ ಅತ್ಯಂತ ಬೃಹತ್ ಆಡಿಟೋರಿಯಂ ಇದಾಗಿದೆ. ಸುಮಾರು 50 ಸಾವಿರ ಚ.ಅ.ವಿಸ್ತೀರ್ಣದ ಈ ಆಡಿಟೋರಿಯಂನಲ್ಲಿ 250ಕ್ಕೂ ಅಧಿಕ ಕಾರುಗಳ ಪಾರ್ಕಿಂಗ್‌ಗೆ ಸ್ಥಳಾವಕಾಶವಿದೆ.

1 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಇದೆ. ಅಲ್ಲದೆ ಏಕಕಾಲದಲ್ಲಿ 1 ಸಾವಿರ ಮಂದಿ ಭೋಜನ ಮಾಡಬಹುದಾದಷ್ಟು ವಿಶಾಲವಾದ ಹಾಲ್‌ನ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ನಮಾಝ್ ಕೊಠಡಿಯ ವ್ಯವಸ್ಥೆಯೂ ಇದೆ.

ವಧು-ವರರ ಸುಸಜ್ಜಿತ ಡ್ರೆಸ್ಸಿಂಗ್ ರೂಂ, ಜನರೇಟರ್-ಧ್ವನಿ ವರ್ಧಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಆಡಳಿತ ಪಾಲುದಾರರಾದ ವಿ.ಎಂ.ಫಾರೂಕ್ ಮತ್ತು ಮುಹಮ್ಮದ್ ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News