ಬೈಕ್ ಅಪಘಾತ: ಸವಾರ ಮೃತ್ಯು

Update: 2019-06-21 16:22 GMT

ಶಿರ್ವ, ಜೂ.21: ಬೈಕೊಂದು ಪಲ್ಟಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶಿರ್ವ ಚೆಕ್‌ಪಾದೆ ಸಮೀಪದ ತಿರುವಿನಲ್ಲಿ ಜೂ.20ರಂದು ರಾತ್ರಿ 11:30ರ ಸುಮಾರಿಗೆ ನಡೆದಿದೆ.

ಮೃತರನ್ನು ಶಿರ್ವ ಚೆಕ್‌ಪಾದೆಯ ವಿನೋದ್(27) ಎಂದು ಗುರುತಿಸ ಲಾಗಿದೆ. ಇವರ ಗೆಳೆಯ ಬೈಕ್ ಹಿಂಬದಿ ಸವಾರ ಶಿರ್ವ ನಿವಾಸಿ ಕುಮಾರ (27) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರು ಮರೀನಾ ಬಾರಿನಲ್ಲಿ ಊಟ ಮಾಡಿ ನಂತರ ಕಾಪು ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ವಿನೋದ್ ಒಮ್ಮೆಲೇ ಬ್ರೇಕ್ ಹಾಕಿದರೆನ್ನಲಾಗಿದೆ.

ಇದರ ಪರಿಣಾಮ ನಿಯಂತ್ರಣ ತಪ್ಪಿಇವರಿಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ವಿನೋದ್ ಸ್ಥಳದಲ್ಲೇ ಮೃತ ಪಟ್ಟರು. ವಿನೋದ್ ಶಿರ್ವದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News