ಪಿಕ್‌ಅಪ್ ವಾಹನ ಕಳವು

Update: 2019-06-21 16:24 GMT

ಕಾಪು, ಜೂ.21: ಕಟಪಾಡಿ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಶ್ರೀನಿಧಿ ಕಾಂಪ್ಲೆಕ್ಸ್ನಲ್ಲಿರುವ ಗುಜರಿ ವ್ಯಾಪಾರದ ಅಂಗಡಿ ಎದುರು ನಿಲ್ಲಿಸಿದ ಕೆಎ19 ಸಿ 8184 ಬಿಳಿ ಬಣ್ಣದ ಮಹೇಂದ್ರ ಪಿಕ್ಅಪ್ ವಾಹನ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಸುರತ್ಕಲ್ ಕೃಷ್ಣಾಪುರ ನಿವಾಸಿ ಮುಹಮ್ಮದ್ ರಕೀಬ್ ಎಂಬವರು ಜೂ.16 ರಂದು ತನ್ನ ಅಂಗಡಿ ಎದುರು ವಾಹನವನ್ನು ನಿಲ್ಲಿಸಿ ಹೋಗಿದ್ದು, ಜೂ.17 ರಂದು ಬೆಳಗ್ಗೆ 9ಗಂಟೆ ಬಂದು ನೋಡಿದಾಗ ವಾಹನ ಕಳವಾಗಿರುವುದು ಕಂಡು ಬಂತು.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News