ಮಂಗಳೂರು ರೈಲು ನಿಲ್ದಾಣದಲ್ಲಿ ಕಣ್ಣೂರಿನ ಮಹಿಳೆ ಮೃತ್ಯು

Update: 2019-06-21 16:40 GMT

ಮಂಗಳೂರು, ಜೂ.21: ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೇರಳದ ಕಣ್ಣೂರಿಗೆ ತೆರಳುತ್ತಿದ್ದ ಮಹಿಳೆಯೋರ್ವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ಶುಕ್ರವಾರ ರಾತ್ರಿ ಮೃತಪಟ್ಟ ಘಟನೆ ನಡೆದಿದೆ.

ಕೇರಳದ ಕಣ್ಣೂರು ನಿವಾಸಿ ಆಯಿಷಾ (65) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಶುಕ್ರವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಮಹಿಳೆಯು ನಾಲ್ವರಿದ್ದ ಕುಟುಂಬದೊಂದಿಗೆ ಕೇರಳದ ಕಣ್ಣೂರಿಗೆ ವಾಪಸಾಗುತ್ತಿದ್ದರು. ಸಂಜೆ ವೇಳೆ ಉಡುಪಿಯಿಂದ ಬೆಂಗಳೂರು ಟ್ರೈನ್‌ಗೆ ಹತ್ತಿದ ಮಹಿಳೆಯು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾತ್ರಿ 8:30ಕ್ಕೆ ಇಳಿದುಕೊಂಡಿದ್ದಾರೆ.

ಮಂಗಳೂರಿನಿಂದ ಕಣ್ಣೂರಿಗೆ ರಾತ್ರಿ 10 ಗಂಟೆಗೆ ರೈಲಿನಲ್ಲಿ ತೆರಳಲು ಕುಟುಂಬವು ಟಿಕೆಟ್ ಪಡೆದು ರೈಲಿಗಾಗಿ ಕಾಯುತ್ತಾ ಕುಳಿತ್ತಿತ್ತು. ರಾತ್ರಿ 8:50ರ ಸುಮಾರು ಆಯಿಷಾ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಕೂಡಲೇ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News