ಬದುಕಿನ ವೈರುಧ್ಯ ಪ್ರತಿಪಾದಿಸುವ ನಾಟಕಗಳು: ಡಾ.ವಿವೇಕ ರೈ

Update: 2019-06-21 17:29 GMT

ಮಂಗಳೂರು, ಜೂ.21: ಬದುಕಿನ ವೈರುಧ್ಯಗಳನ್ನು ಸಮರ್ಥವಾಗಿ ಪ್ರತಿಪಾದಿಸಲು ನಾಟಕ ಪರಿಣಾಮಕಾರಿ ಮಾಧ್ಯಮ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು, ಸಿರಿವರ ಪ್ರಕಾಶನ, ಬೆಂಗಳೂರು ಸೋಮ ಯಾಜಿ ಪ್ರಕಾಶನ, ಸಾಲಿಗ್ರಾಮ ಇವರ ಆಶ್ರಯದಲ್ಲಿ ನಗರದ ಎಸ್.ಡಿ.ಎಂ ಕಾನೂನು ಮಹಾ ವಿದ್ಯಾಲಯದ ಸಭಾಂಗಣದಲ್ಲಿಂದು ಶಶಿರಾಜ್ ಕಾವೂರು ಅವರ ಬರ್ಬರಿಕ, ವೈದೋ ನಾರಾ ಯಣೋ ಹರಿ, ಐಸಿಯೂ ನೋಡುವೆ ನಿನ್ನ ಎಂಬ ಮೂರು ನಾಟಕಗಳ ಎರಡು ಪುಸ್ತಕಗಳನ್ನು ಬಿಡುಗಡೆ ಮಾತನಾಡುತ್ತಿದ್ದರು.

ಕನ್ನಡದ ಪ್ರಮುಖ ನಾಟಕಕಾರರಾದ ಶ್ರೀರಂಗರ ನಂತರ ಗಿರೀಶ್ ಕಾರ್ನಾಡ್ ಹೊಸ ಆಯಾಮ ನೀಡುತ್ತಾರೆ. ಪುರಾಣದ ಕಥೆಗಳನ್ನು ಇಟ್ಟುಕೊಂಡು ಆಧುನಿಕ ಸಾಮಾಜದ ವಿಶ್ಲೇಷಣೆಯನ್ನು ತಮ್ಮ ನಾಟಕದ ಮೂಲಕ ಮಾಡುತ್ತಾರೆ. ನಮ್ಮ ನಡುವೆ ಇರುವ ಜನಪದರಲ್ಲಿ ಹಲವಾರು ಮಹಾಭಾರತದ ವಿಭಿನ್ನ ಮಾದರಿಗಳಿವೆ. ಆ ಮಹಾಭಾರತದಲ್ಲಿ ಆ ಕಾಲದ ಜನರ ಬದುಕಿನ ಘಟನೆಗಳು ಹಾಸುಹೊಕ್ಕಾಗಿದೆ. ಇತ್ತೀಚೆಗೆ ನಿಧನರಾದ ಡಿ.ಕೆ.ಚೌಟರು ತುಳು ನಾಟಕಗಳ ಮೂಲಕ ರಂಗಭೂಮಿ ಗೆ ಕೊಡುಗೆ ನೀಡಿದ್ದಾರೆ. ಅವರ ನಿಧನದ ನಂತರ ಮತ್ತೆ ನಾಟಕ ಸಾಹಿತ್ಯವನ್ನು ರಚಿಸುವ ಕೆಲಸ ಶಶಿರಾಜ್ ಕಾವೂರು ನಂತವರು ಮಾಡಲು ಹೊರಟಿರುವುದು ಶ್ಲಾಘನೀಯ ಎಂದರು.

ಸರಕಾರ ಗ್ರಂಥಾಲಯಗಳನ್ನು ಸರಕಾರಿ ಇಲಾಖೆಯಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆ ಯಲ್ಲಿ ತೊಡಗಿದಾಗ ಗ್ರಂಥಾಲಯಗಳು ಮುಚ್ಚುವ ಅಪಾಯವಿದೆ. ಇದರಿಂದ ಭಾಷಾ ಬೆಳವಣಿಗೆಯ ದ್ರಷ್ಟಿಯಿಂದ, ಓದುಗರಿಗೆ ನಷ್ಟವಾಗಬಹುದು. ಜೊತೆಗೆ ಸಮಗ್ರ ಸಾಹಿತ್ಯ ಕ್ಷೇತ್ರಕ್ಕೆ ನಷ್ಟವಾಗಬಹುದು. ಈ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆಯನ್ನು ಮುಚ್ಚದಂತೆ ಸರ್ಕಾರಕ್ಕೆ ಸಾರ್ವಜನಿಕರು ಮಾಡಬೇಕೆಂದು ರವೀಂದ್ರನಾಥ ಸಿರಿವರ ಅಭಿಪ್ರಾಯಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಹಿಸಿ ಮಾತನಾಡುತ್ತಾ, ಮಾನವೀಯ ಸಂಬಂಧಗಳು ವ್ಯಾಪಾರೀಕರಣಗೊಳುತ್ತಿರುವ ಕಾಲಘಟ್ಟದಲ್ಲಿ ಸುಸಂಸ್ಕೃತ ಸಮಾಜದ ನಿರ್ಮಿಸುವಲ್ಲಿ ನಾಟಕ ಪ್ರಬಲ ಮಾಧ್ಯಮ ಎಂದು ತಿಳಿಸಿದ್ದಾರೆ.

ಅತಿಥಿಯಾಗಿ ಜಿಲ್ಲಾ ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ, ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ, ಸಿರಿವಾರ ಪ್ರಕಾಶನದ ಮಾಲಕ ರವೀಂದ್ರ ನಾಥ, ಕೆನರಾ ಕಾಲೇಜಿನ ಗೋಪಾ ಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಶಶಿ ರಾಜ್ ಕಾವೂರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News