ಮಟ್ಕಾ: ಮೂವರ ಬಂಧನ

Update: 2019-06-21 18:19 GMT

ಮಂಗಳೂರು, ಜೂ.21: ನಗರದ ಹೊರವಲಯದ ಪದವಿನಂಗಡಿಯಲ್ಲಿ ನಡೆದ ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕಾವೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕುಡುಪು ನಡುಮನೆ ನಿವಾಸಿ ಕೃಷ್ಣ ಮೊಲಿ (45), ಆಕಾಶಭವನದ ಜಗದೀಶ್, ಕೂಳೂರಿನ ಭಾಸ್ಕರ್ ಬಂಧಿತರು.

ಕೃಷ್ಣ ಮೊಲಿ ಪದವಿನಂಗಡಿ ಜಂಕ್ಷನ್‌ನಲ್ಲಿ ಮಟ್ಕಾದಲ್ಲಿ ತೊಡಗಿದ್ದ. ಈತನ ಬಳಿಯಿಂದ 3,790 ರೂ. ವಶಪಡಿಸಿಕೊಳ್ಳಲಾಗಿದೆ. ಹಣ ಸಂಗ್ರಹ ಮಾಡುತ್ತಿದ್ದ ಜಗದೀಶ್ ಹಾಗೂ ಭಾಸ್ಕರ್ ಅವರನ್ನು ಹಂಪನಕಟ್ಟೆ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಕಾವೂರು ಇನ್‌ಸ್ಪೆಕ್ಟರ್ ಕೆ.ಆರ್.ನಾಯಕ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News