ಹೊಸಂಗಡಿಯಲ್ಲಿ ‘ಗ್ರ್ಯಾಂಡ್ ಆಡಿಟೋರಿಯಂ’ ಉದ್ಘಾಟನೆ

Update: 2019-06-23 14:25 GMT

ಮಂಜೇಶ್ವರ, ಜೂ.23: ಇಲ್ಲಿಗೆ ಸಮೀಪದ ಹೊಸಂಗಡಿ ಜಂಕ್ಷನ್ ಬಳಿ ನಿರ್ಮಾಣಗೊಂಡಿರುವ ‘ಗ್ರ್ಯಾಂಡ್ ಆಡಿಟೋರಿಯಂ’ ಅನ್ನು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಅಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ರವಿವಾರ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದುಆಗೈದ ಅವರು ಆಶೀರ್ವಚನ ನೀಡಿದರು. ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸೈಯದ್ ಎಂ.ಎ. ಅಥಾವುಲ್ಲಾ ತಂಙಳ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಸೈಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಅವರ ಪುತ್ರ ಅಸೈಯದ್ ಕೆ.ಎಸ್.ಮುಕ್ತಾರ್ ತಂಙಳ್ ಮತ್ತು ಅಸೈಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ಮಲ್‌ಹರ್ ಅವರು ನಮಾಝ್ ಕೊಠಡಿಯನ್ನು ಉದ್ಘಾಟಿಸಿದರು.

ಕಾಣಿಲ ಶ್ರೀ ಭಗವತಿ ದೇವಸ್ಥಾನದ ಕನ್ನ ಕಲೆಕಾರ್ ಗೋಪಾಲ್ ದಾಸ್ ಡೈನಿಂಗ್ ಹಾಲ್ ಮತ್ತು ಸೆಕ್ರೇಡ್ ಹಾರ್ಟ್ ಆಫ್ ಜೋಸೆಫ್‌ನ ಪ್ರಧಾನ ಧರ್ಮಗುರು ಫಾ. ಫ್ರಾನ್ಸಿಸ್ ರೊಡ್ರಿಗಸ್ ಅವರು ಕಚೇರಿಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಕಾಸರಗೋಡು ಜಿಪಂ ಅಧ್ಯಕ್ಷ ಎಜಿಸಿ ಬಶೀರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ, ಮಂಜೇಶ್ವರ ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ, ಕರ್ನಾಟಕ ರಾಜ್ಯ ಸರಕಾರದ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಝೀಝ್ (ಮೈಸೂರು ಬಾವ), ಹಕೀಂ ಕುನ್ನಿಲ್, ಅಡ್ವಕೇಟ್ ಶ್ರೀಕಾಂತ್, ಬಿ.ವಿ.ರಾಜನ್, ಕೆ.ಆರ್. ಜಯಾನಂದ, ಹಾಜಿ ಎನ್.ಎಂ. ಅಬೂಬಕರ್, ಹಾಜಿ ಕೆ. ಅಬುಲ್ಲಾ (ಬಾವಾ), ಹಾಜಿ ವಿ.ಎಂ. ಅಬ್ದುಲ್ ಹಮೀದ್ (ಯಾಫ್ಕೊ), ಹಾಜಿ ಎಂ.ಎ. ಮುಹಮ್ಮದ್, ಹಾಜಿ ಹಸೈನಾರ್ ಕೂಡೇಲ್, ಹಾಜಿ ವಿ.ಕೆ. ಪೊಡಿಯಬ್ಬ, ನಿವೃತ್ತ ಸಬ್ ರಿಜಿಸ್ಟ್ರಾರ್ ಕೆ.ಎಂ. ಅಬ್ದುಲ್ ರಝಾಕ್, ಕುನಿಲ್ ಸಂಸ್ಥೆಯ ಉಪಾಧ್ಯಕ್ಷ ಪಿ.ಎಸ್. ಮೊಯ್ದಿನ್ ಕುಂಞಿ, ಹರಿಶ್ಚಂದ್ರ, ಹಾಜಿ ಮುನೀರ್ ಬಾವಾ, ಲಂಡನ್ ಮುಹಮ್ಮದ್ ಹಾಜಿ, ಅಬ್ರಾರ್ ಮೌಲವಿ, ಎಂ.ಎಂ. ಅಬೂಬಕರ್, ಎಂ.ಎ. ಅಬ್ದುಲ್ ಹಾಜಿ ಕಲಂದರ್ ಸ್ಟೋರ್, ಮುಹಮ್ಮದ್ ಹಾಜಿ ಮಂಗಲ್ಪಾಡಿ ಮುಬಾರಕ್ ಅಬ್ಬಾಸ್ ಹಾಜಿ ಮತ್ತಿತರರು ಭಾಗವಹಿಸಿದ್ದರು.

ಆಡಳಿತ ಪಾಲುದಾರರಾದ ವಿ.ಎಂ. ಫಾರೂಕ್ ಮತ್ತು ಮುಹಮ್ಮದ್ ಅಶ್ರಫ್ ಹಾಗೂ ಯಾಫ್ಕೋ ಗ್ರೂಪ್‌ನ ಶಬಾಝ್ ವಿ.ಎಚ್., ಶಾಝ್ ವಿ.ಎಚ್., ಬಾವಾ ಗ್ರೂಪ್‌ನ ಕೆ.ಎ.ಮನ್ಸೂರ್, ಹೊಸಂಗಡಿ ಫಾರೂಕ್ ಟಿಂಬರ್ ಆ್ಯಂಡ್ ಸ್ವಾಮಿಲ್ ಯಾಕೂಬ್, ಕಾರವಾರ ನ್ಯೂಸಿಟಿ ಪ್ಲೈವುಡ್‌ನ ಮಹ್ಮೂದ್, ಹೊಸಂಗಡಿಯ ಹೈ-ಟೆಕ್ ವುಡ್ ಫರ್ನಿಶ್‌ನ ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.

ಕೆಲವು ವರ್ಷಗಳ ಹಿಂದೆ ನಾನು ಸಂಬಂಧಿಯ ಮದುವೆಯನ್ನು ಹಾಲ್‌ನಲ್ಲಿ ನೆರವೇರಿಸಿದಾಗ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಮನೆಯಲ್ಲಿ ಮದುವೆಯಂತಹ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಇಲ್ಲದ್ದವರು ಹಾಲ್‌ಗಳಲ್ಲಿ ಮದುವೆ ನೆರವೇರಿಸುವುದು ಸಹಜ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಅಗತ್ಯಕ್ಕೆ ಅನುಗುಣವಾಗಿ ಬೌದ್ಧಿಕ ಸೌಕರ್ಯಗಳನ್ನು ಬಳಸುವುದಕ್ಕೆ ವಿರೋಧವೂ ಸರಿಯಲ್ಲ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ ಜನರು ಮೆಚ್ಚುವಂತಹ ಹಾಲ್ ಇದಾಗಲಿ.
- ಅಸೈಯದ್ ಜಿಫ್ರಿ ಮುತ್ತುಕೋಯ ತಂಙಳ್
ಅಧ್ಯಕ್ಷರು, ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ

ಮಂಗಳೂರು-ಕಾಸರಗೋಡು ಮಧ್ಯೆ ತಲೆ ಎತ್ತಿ ನಿಂತಿರುವ ಈ ಆಡಿಟೋರಿಯಂ ಜಿಲ್ಲೆಯ ಜನತೆಯ ಸಂಭ್ರಮಕ್ಕೆ ಕಾರಣವಾಗಲಿದೆ. ನಾಡಿನ ವಿಕಸನಕ್ಕೆ ಇಂತಹ ಹಾಲ್‌ಗಳ ಅಗತ್ಯವಿದೆ. ಅಲ್ಲಾಹನ ಅನುಗ್ರಹದಿಂದ ಹಾಲ್ ಸಮೃದ್ಧಿಗೊಳ್ಳಲಿ.
- ಅಸೈಯದ್ ಎಂ.ಎ. ಅಥಾವುಲ್ಲಾ ತಂಙಳ್
ಅಧ್ಯಕ್ಷರು, ಮಂಜೇಶ್ವರ ಸಂಯುಕ್ತ ಜಮಾಅತ್

ಈ ಆಡಿಟೋರಿಯಂನಲ್ಲಿ ಎಲ್ಲಾ ಜಾತಿ, ಧರ್ಮದವರ ಮದುವೆ ಮತ್ತಿತರ ಕಾರ್ಯಕ್ರಮಗಳು ಸದಾ ನಡೆಯಲಿ ಮತ್ತು ಆ ಮೂಲಕ ಇದು ಮತೀಯ ಸೌಹಾರ್ದದ ಕೇಂದ್ರ ಬಿಂದುವಾಗಲಿ.
- ಗೋಪಾಲ್ ದಾಸ್
ಕನ್ನ ಕಲೆಕಾರ್, ಕಾಣಿಲ ಶ್ರೀ ಭಗವತಿ ದೇವಸ್ಥಾನ

ಭವ್ಯ ಆಡಿಟೋರಿಯಂ ನಿರ್ಮಿಸುವ ಮೂಲಕ ಹೊಸಂಗಡಿಯ ಅಭಿವೃದ್ಧಿಯಲ್ಲಿ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ದಿ. ಹಾಜಿ ಮೊಯ್ದಿನ್ ಕುಂಞಿ ಅವರ ಕನಸನ್ನು ಅವರ ಮಗ ವಿ.ಎಂ. ಫಾರೂಕ್ ನನಸುಗೊಳಿಸಿದ್ದಾರೆ. ಇದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕಿದೆ.
- ಎನ್.ಎ.ನೆಲ್ಲಿಕುನ್ನು
ಶಾಸಕರು, ಕಾಸರಗೋಡು

ಕಾರ್ಯಕ್ರಮದಲ್ಲಿ ಇಂಜಿನಿಯರ್ ಅಬ್ದುಲ್ ಖಾದರ್, ಅಬೀದ್ ಅಲಿ, ಮುಹಮ್ಮದ್ ಸಿರಾಜುದ್ದೀನ್, ಆಡಿಟೋರಿಯಂ ಕಾಮಗಾರಿಯಲ್ಲಿ ಸಹಕರಿಸಿದ ಅಶೋಕ್, ರತೀಶ್, ಯಾದವ ಮತ್ತಿತರರನ್ನು ಗೌರವಿಸಲಾಯಿತು.

ಕಾಸರಗೋಡು ಜಿಲ್ಲೆಯ ಸಂಪೂರ್ಣ ಹವಾನಿಯಂತ್ರಿತದಿಂದ ಕೂಡಿದ ಮೂರು ಅಂತಸ್ತಿನ ಅತ್ಯಂತ ಬೃಹತ್ ಆಡಿಟೋರಿಯಂ ಇದಾಗಿದೆ. ಸುಮಾರು 50 ಸಾವಿರ ಚ.ಅ.ವಿಸ್ತೀರ್ಣದ ಈ ಆಡಿಟೋರಿಯಂನಲ್ಲಿ 250ಕ್ಕೂ ಅಧಿಕ ಕಾರುಗಳ ಪಾರ್ಕಿಂಗ್‌ಗೆ ಸ್ಥಳಾವಕಾಶವಿದೆ. 1 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಇದೆ. ಅಲ್ಲದೆ ಏಕಕಾಲದಲ್ಲಿ 1 ಸಾವಿರ ಮಂದಿ ಭೋಜನ ಮಾಡಬಹುದಾದಷ್ಟು ವಿಶಾಲವಾದ ಹಾಲ್‌ನ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ನಮಾಝ್ ಕೊಠಡಿಯ ವ್ಯವಸ್ಥೆಯೂ ಇದೆ. ವಧು-ವರರ ಸುಸಜ್ಜಿತ ಡ್ರೆಸ್ಸಿಂಗ್ ರೂಂ, ಜನರೇಟರ್-ಧ್ವನಿ ವರ್ಧಕ ವ್ಯವಸ್ಥೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News