ರಾಮಕೃಷ್ಣ ಮಿಷನ್ನಿಂದ 5 ಹಂತದ ಶ್ರಮದಾನ
Update: 2019-06-23 14:52 GMT
ಮಂಗಳೂರು, ಜೂ. 23: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 29ನೇ ವಾರದ ಶ್ರಮದಾನವು ರವಿವಾರ ಕುಲಶೇಖರದಲ್ಲಿ ಜರುಗಿತು. ಕೊರ್ಡೆಲ್ ಹೋಲಿ ಚರ್ಚ್ನ ಫಾ. ವಿಕ್ಟರ್ ಮಚಾದೋ ಶ್ರಮದಾನಕ್ಕೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು.
ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಶುಭೋದಯ ಆಳ್ವ, ಪ್ರೊ. ಸತೀಶ್ ಭಟ್ ರಂಜನ್ ಬೆಳ್ಳರ್ಪಾಡಿ, ಮೆಹಬೂಬ್ ಖಾನ್, ಸತ್ಯನಾರಾಯಣ ಭಟ್, ತಾರಾನಾಥ್ ಆಳ್ವ, ಶಿವರಾಜ್ ಪೂಜಾರಿ, ಲೋಕೇಶ್ ಕೊಟ್ಟಾರ ಮತ್ತಿತರರು ಉಪಸ್ಥಿತರಿದ್ದರು.