ಉಡುಪಿ: 3 ವರ್ಷ ರೈಲು ನಿಲ್ದಾಣದ ಸ್ವಚ್ಚತೆ
Update: 2019-06-24 16:51 GMT
ಉಡುಪಿ, ಜೂ.24: ಸ್ವಚ್ಛ ಭಾರತ ಅಭಿಯಾನದಡಿ ಉಡುಪಿ ಜಿಲ್ಲೆಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಇಂದ್ರಾಳಿಯಲ್ಲಿರುವ ರೈಲು ನಿಲ್ದಾಣದಲ್ಲಿ ಸತತವಾಗಿ 36ನೇ ತಿಂಗಳು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ದಾಖಲೆ ಬರೆದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಉಡುಪಿ ಜಿಲ್ಲಾ ಕಮಿಷನರ್ ಡಾ.ವಿಜಯೇಂದ್ರ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸತತ ಮೂರು ವರ್ಷಗಳಿಂದ ಪ್ರತಿ ತಿಂಗಳು ಕೊಂಕಣ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತಿದ್ದಾರೆ.
ಉಡುಪಿಯ ರೈಲು ನಿಲ್ದಾಣ ಶುಭ್ರ ಹಾಗೂ ಸ್ವಚ್ಛವಾಗಿರುವುದರಲ್ಲಿ ಭೌರತ್ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾತ್ರ ಮಹತ್ವದ್ದಾಗಿದೆ ಎಂದು ಕೊಂಕಣ ರೈಲು ಮಂಗಳೂರು ಪಿಆರ್ಓ ಕೆ.ಸುಧಾ ಕೃಷ್ಣಮೂರ್ತಿ ಅವರು ಕೊಂಕಣ ರೈಲ್ವೆಯ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.