ಲಯನ್ಸ್ ಕ್ಲಬ್ ಬಂಟ್ವಾಳ: ನೂತನ ಪದಾಧಿಕಾರಿಗಳ ಪದಗ್ರಹಣ

Update: 2019-06-24 17:59 GMT

ಬಂಟ್ಬಾಳ, ಜೂ. 24: ಲಯನ್ಸ್ ಕ್ಲಬ್ ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ರವಿವಾರ ನಡೆಯಿತು.

ಪದಗ್ರಹಣಾಧಿಕಾರಿಯಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಗವರ್ನರ್ ಸಿ.ಎ. ಮುತ್ತಣ ಅವರು, ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿಯಾಗಿ ರಾಧಕೃಷ್ಣ ಬಂಟ್ವಾಳ್, ಕೋಶಾಧಿಕಾರಿಯಾಗಿ ದೇವಿಕಾ ದಾಮೋದರ್ ಮತ್ತಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ದಡ್ಡಲಕಾಡು ಸರಕಾರಿ ಶಾಲೆ ಪುನರ್ ನಿರ್ಮಾಣದ ರುವಾರಿ ಪ್ರಕಾಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.  ದಡ್ಡಲಕಾಡು ಶಾಲೆಯ ಉನ್ನತೀಕರಣಕ್ಕಾಗಿ 25 ಸಾವಿರ ರೂ. ದೇಣಿಗೆಯನ್ನು ನೂತನ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಪ್ರಕಾಶ್ ಅಂಚನ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ನಿಧಿ ಹಸ್ತಾಂತರ ನಡೆಯಿತು. ಕ್ಲಬ್  ಡೈರೆಕ್ಟರಿ ಸ್ಪಂದನ ಬಿಡುಗಡೆ ಗೊಳಿಸಲಾಯಿತು. 

ಚುನಾಯಿತ ಮೊದಲ ಉಪಗವರ್ನರ್, ಡಾ. ಗೀತ್‍ಪ್ರಕಾಶ್, ಚುನಾಯಿತ ದ್ವಿತೀಯ  ಉಪಗವರ್ನರ್  ವಸಂತ ಕುಮಾರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಲೋಕೇಶ್ ಉಲ್ಲಾಳ್, ಜಗದೀಶ್ ಎಡಪಡಿತ್ತಾಯ, ಕಾರ್ಯದರ್ಶಿ ರಾಮಯ್ಯ ಶೆಟ್ಟಿ, ಕೋಶಧಿಕಾರಿ ಸಂದೀಪ್ ಕುಮಾರ್ ಎಚ್. ವೇದಿಕೆಯಲ್ಲಿದ್ದರು. 

ನಿರ್ಗಮನ ಅಧ್ಯಕ್ಷ ಸುಧಾಕರ ಆಚಾರ್ಯ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ರಾಧಕೃಷ್ಣ ಬಂಟ್ವಾಳ್ ವಂದಿಸಿದರು.  ದಾಮೋದರ ಬಿ.ಎಂ. ಹಾಗೂ ಚಿತ್ರ ಎಡಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News