ಬಸ್ರೂರು: ಶಾಲಾ ಮಕ್ಕಳಿಗೆ ಕೊಡೆ, ಡೈರಿ ವಿತರಣೆ

Update: 2019-06-25 13:30 GMT

ಕುಂದಾಪುರ, ಜೂ.25: ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್ ಇವರ ವತಿಯಿಂದ ದಾನಿಗಳು ನೀಡಲ್ಪಟ್ಟ ಕೊಡೆ ಹಾಗೂ ಡೈರಿಗಳನ್ನು ಬಸ್ರೂರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಡಾ.ಸಂದೀಪ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭಾಕರ ಕುಂಭಾಶಿ, ಕಾರ್ಯದರ್ಶಿ ರಾಜು ಪೂಜಾರಿ ಮೂಡ್ಲಕಟ್ಟೆ, ಯು.ಸದಾನಂದ ಉಡುಪ, ರೋನಾಲ್ಡ್ ಡಿಮೆಲ್ಲೊ, ಕೆ.ಎಸ್. ಮಂಜುನಾಥ ಗಾಣಿಗ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಕೆ.ಎಸ್.ಮಂಜುನಾಥ ಸ್ವಾಗತಿಸಿದರು. ಶಾಲಾ ಶಿಕ್ಷಕಿ ನಮಿತಾ ಪ್ರಭು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News