ಪುತ್ತೂರು: ಬಿದ್ದು ಸಿಕ್ಕಿದ ಚಿನ್ನ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವತಿ

Update: 2019-06-25 14:00 GMT

ಪುತ್ತೂರು; ರಸ್ತೆಯಲ್ಲಿ ಬಿದ್ದು ಸಿಕ್ಕಿದ ರೂ.60 ಸಾವಿರ ಮೌಲ್ಯದ ಚಿನ್ನವನ್ನು ವಾರಸುದಾರರಿಗೆ ಹಿಂದುರಿಗಿಸಿದ ಯುವತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. 

ಜೂ. 23ರಂದು ಎಪಿಎಂಸಿ ರಸ್ತೆಯಲ್ಲಿರುವ ಬಜಾಜ್ ಶೋರೂಮ್ ಉದ್ಯೋಗಿ ಅಶೋಕ್ ಎಂಬವರ ಚಿನ್ನದ ಬ್ರಾಸ್‍ಲೆಟ್ ಪುತ್ತೂರು -ಪುಣಚ ರಸ್ತೆಯಲ್ಲಿ ಕಳೆದುಹೋಗಿತ್ತು. ಈ ಚಿನ್ನದ ಬ್ರಾಸ್‍ಲೆಟ್ ಮುರ ನಿವಾಸಿ ಧನ್ವಂತರಿ ಆಸ್ಪತ್ರೆಯ ಉದ್ಯೋಗಿ ಚಂದ್ರಿಕಾ ಎಂಬವರಿಗೆ ಸಿಕ್ಕಿತ್ತು. ಅವರು ಈ ಚಿನ್ನವನ್ನು ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಈ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News