ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2019-06-25 15:24 GMT
ಗಂಗೊಳ್ಳಿ, ಜೂ.25: ಮೂರು ವರ್ಷಗಳ ಹಿಂದೆ ಮುಂಬೈಯಲ್ಲಿ ವಾಹನ ಅಪಘಾತದಿಂದ ತಲೆಗೆ ಗಾಯಗೊಂಡು ಮಾನಸಿಕ ಅಸ್ವಸ್ಥರಾಗಿದ್ದ ತ್ರಾಸಿ ಗ್ರಾಮದ ಮೊವಾಡಿಯ ಸುಬ್ಬಣ್ಣ ಶೆಟ್ಟಿ ಎಂಬವರ ಮಗ ಸತೀಶ ಶೆಟ್ಟಿ(36) ಎಂಬವರು ಜೂ.24ರಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಸಹೋದರಿಯ ಮಾನಸಿಕ ಕಾಯಿಲೆ ಹಾಗೂ ಅಜ್ಜಿ ನಿಧನರಾದ ವಿಷಯದಲ್ಲಿ ಮನನೊಂದ ಶಶಿಧರ ಶೆಟ್ಟಿ(29) ಎಂಬವರು ಜೂ.24ರಂದು ಬೆಳಗ್ಗೆ 9.30ರಿಂದ ರಾತ್ರಿ 8ಗಂಟೆ ಮಧ್ಯಾವಧಿಯಲ್ಲಿ ಕುಚ್ಚೂರು ಗ್ರಾಮದ ಸಳ್ಳೆಕಟ್ಟೆ ಎಂಬಲ್ಲಿರುವ ತನ್ನ ಹೊಸ ಮನೆಯ ಕಟ್ಟಡದ ಕೋಣೆಯಲ್ಲಿರುವ ಕಬ್ಬಿಣದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.