ಮಲ್ಪೆ: ಪೊಲೀಸ್ ಇಲಾಖೆ ನೇಮಕಾತಿಗೆ ಮಾಹಿತಿ ಕಾರ್ಯಾಗಾರ

Update: 2019-06-26 16:13 GMT

ಉಡುಪಿ, ಜೂ.26: ಪೊಲೀಸ್ ಇಲಾಖೆಯ ವತಿಯಿಂದ ಜೂ.27ರಂದು ಬೆಳಗ್ಗೆ 9:30ಕ್ಕೆ ಮಲ್ಪೆ ಏಳೂರು ಮೊಗವೀರ ಸಭಾಭವನದ ಮತ್ಸ್ಯನಿಧಿ ಸಭಾಂಗಣದಲ್ಲಿ ಎಸೆಸೆಲ್ಸಿ ಪಾಸಾಗಿರುವ ಕರಾವಳಿ ತೀರದ ಮೀನುಗಾರ ಯುವಕ ಹಾಗೂ ಯುವತಿಯರಿಗೆ ಪೊಲೀಸ್ ಇಲಾಖೆಗೆ ನೇಮಕಾತಿ ಕುರಿತು ಮಾಹಿತಿ ಕಾರ್ಯಾಗಾರವೊಂದು ನಡೆಯಲಿದೆ.

ಕರ್ನಾಟಕ ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಾಸ್ಕರ ರಾವ್ ಈ ಮಾಹಿತಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News