ಮನೆಗೆ ನುಗ್ಗಿ ಕಳವಿಗೆ ಯತ್ನ

Update: 2019-06-26 16:31 GMT

ಉಡುಪಿ, ಜೂ.26: ಪುತ್ತೂರು ಗ್ರಾಮದ ಗೋಪಾಲಪುರ ಎಂಬಲ್ಲಿ ಮನೆ ಯೊಂದಕ್ಕೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ಜೂ.25ರಂದು ರಾತ್ರಿ ವೇಳೆ ನಡೆದಿದೆ.

 ಹೆನ್ರಿ ಮಚಾದೋ ಮನೆಗೆ ಬೀಗ ಹಾಕಿ ಮುಂಬೈಗೆ ತೆರಳಿದ್ದು, ಈ ವೇಳೆ ಮನೆಯ ಮುಖ್ಯದ್ವಾರವನ್ನು ಜಖಂಗೊಳಿಸಿ ಒಳನುಗ್ಗಿದ ಕಳ್ಳರು, ಕಪಾಟು ಗಳನ್ನು ತೆರೆದು ವಸ್ತುಳನ್ನು ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News