ಭಾಸ್ಕರ್ ಶೆಟ್ಟಿ ಕೊಲೆ: ಸಾಕ್ಷಿಗಳ ವಿಚಾರಣೆ

Update: 2019-06-26 16:32 GMT

ಉಡುಪಿ, ಜೂ.26: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಇಂದು ಮತ್ತೆ ಆರಂಭಗೊಂಡಿದೆ.

ಪ್ರಕರಣದ ತನಿಖಾ ತಂಡದಲ್ಲಿದ್ದ ಸಿಐಡಿಯ ನಿವೃತ್ತ ಡಿವೈಎಸ್ಪಿ ಪಿ.ವಿ.ಎಂ. ಸ್ವಾಮಿ, ಡಿವೈಎಸ್ಪಿ ಎಸ್.ಬದರಿನಾಥ್ ಅವರ ಮುಖ್ಯ ವಿಚಾರಣೆ ಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ನಡೆಸಿದರು. ವಿಧಿ ವಿಜ್ಞಾನ ಪ್ರಯೋಗಾಲಯದ ಮಂಗಳೂರು ಪ್ರಾದೇಶಿಕ ಅಧಿಕಾರಿ ಕುಮುದಾ ಅವರನ್ನು ಆರೋಪಿ ಪರ ವಕೀಲರು ಪಾಟಿ ಸವಾಲಿಗೆ ಒಳಪಡಿಸಿದರು.

ಈ ಸಂದರ್ಭದಲ್ಲಿ ಆರೋಪಿ ರಾಜೇಶ್ವರಿ ಶೆಟ್ಟಿ ನ್ಯಾಯಾಲಯದಲ್ಲಿ ಹಾಜರಿ ದ್ದರು. ಉಳಿದ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದರು. ನಾಳೆಯೂ ಸಾಕ್ಷಿಳ ವಿಚಾರಣೆ ಮುಂದುವರೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News