ಹಿರಿಯ ಪತ್ರಕರ್ತ ವಿಷ್ಣು ಉಪಾಧ್ಯಾಯ ನಿಧನ

Update: 2019-06-27 11:35 GMT

ಹೆಬ್ರಿ :  ಹಿರಿಯ ಪತ್ರಕರ್ತ, ರಾಜ್ಯಮಟ್ಟದ ಕಾರ್ಮಿಕರ ಮುಖಂಡನಾಗಿ ಗುರುತಿಸಿಕೊಂಡಿದ್ದ ವಿಷ್ಣು ಉಪಾಧ್ಯಾಯ (50) ಅವರು ಗುರುವಾರ ಹರಿಹರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಬಲ್ಲಾಡಿಯವರಾದ ವಿಷ್ಣು ಉಪಾಧ್ಯಾಯ ಪ್ರತಿಷ್ಠಿತ ಬಲ್ಲಾಡಿ ಮನೆತನದ ಶೀನಾ ಉಪಾಧ್ಯಾಯರ ಪುತ್ರ.

ಹೆಬ್ರಿ ಪರಿಸರದಲ್ಲಿ ಶಿಕ್ಷಣ ಮುಗಿಸಿದ ಅವರು ಬಳಿಕ ಜಾದೂಗಾರನಾಗಿ ಖ್ಯಾತರಾಗಿದ್ದರು. ಜಾದೂ ಚಮತ್ಕಾರದ ನಡುವೆಯೇ ಮಾಧ್ಯಮ ಕ್ಷೇತ್ರದಲ್ಲಿ ಆಕರ್ಷಿತರಾಗಿ ಚಿಕ್ಕಮಗಳೂರಿನಲ್ಲಿ ನೆಲೆ ನಿಂತು ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದರು.

ಕಾರ್ಮಿಕ ಸಂಘಟನೆ ಕಟ್ಟಿ ಕಾರ್ಮಿಕ ಹೋರಾಟಗಾರನಾಗಿ ರಾಜ್ಯಮಟ್ಟದ ಕಾರ್ಮಿಕ‌ ನಾಯಕನಾಗಿ ಗುರುತಿಸಿಕೊಂಡರು. ಮೂರು ದಶಕಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು. ಬಳಿಕ ಕ್ರಾಂತಿ ಮಾರುತ ಎಂಬ ಪಾಕ್ಷಿಕ ಪತ್ರಿಕರಯನ್ನು ಆರಂಭಿಸಿ ಮುನ್ನಡೆಸುತ್ತಿದ್ದರು. ಬಹುಮುಖ ಪ್ರತಿಭೆಯ ಖ್ಯಾತ ಸಂಘಟಕರಾಗಿದ್ದ ಇವರು ರಾಜ್ಯದಾದ್ಯಂತ ಹಲವಾರು ಜನಪರ ಕಾರ್ಯಕ್ರಮ ಗಳನ್ನು ನಡೆಸಿ ಜನಾನುರಾಗಿಯಾಗಿದ್ದರು.

ಅವಿವಾಹಿತರಾಗಿದ್ದ ಉಪಾಧ್ಯಾಯರು ಮುದ್ರಾಡಿಯವರಾದರೂ ಚಿಕ್ಕಮಗಳೂರಿನವರಾಗಿಯೇ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News