ಬಿ.ಸಿ.ರೋಡ್: ಸ್ಥಳೀಯರಿಂದ ಶ್ರಮದಾನ

Update: 2019-06-29 12:23 GMT

ಬಂಟ್ವಾಳ, ಜೂ. 29: ಕುಡಿಯುವ ನೀರು ಸರಬರಾಜು ಯೋಜನೆಯನ್ವಯ ಪೈಪ್‍ಲೈನ್‍ಗಾಗಿ ರಸ್ತೆ ಅಗೆದು ಮುಚ್ಚದೇ ಇರುವ ಕಾರಣ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರೇ ಶ್ರಮದಾನದ ಮೂಲಕ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ. ಬಿ.ಸಿ.ರೋಡ್ ಬಸ್ ನಿಲ್ದಾಣದ ಹಿಂಬದಿ ರಸ್ತೆಯಲ್ಲಿ ಈ ಸಮಸ್ಯೆ ಎದುರಾಗಿದ್ದು, ಸ್ಥಳೀಯರು ಓಡಾಡಲು ತೊಂದರೆಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿವಾಸಿಗಳಾದ ಸಂಜಯ ಮಲ್ಯ, ಎಂ.ಸುಬ್ರಹ್ಮಣ್ಯ ಪೈ, ಇ.ಧನುಕರ ರೈ, ಶಿವಾನಂದದ ಶೆಣೈ, ಮುಹಮ್ಮದ್ ಶ್ರಮದಾನದ ಮೂಲಕ ಈ ಕಾರ್ಯ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News