ಸ್ಕೂಟರ್ ಅಪಘಾತ: ಸವಾರ ಮೃತ್ಯು

Update: 2019-06-29 16:30 GMT

ಕೋಟ, ಜೂ.29: ಸ್ಕೂಟರೊಂದು ನಿಯಂತ್ರಣ ತಪ್ಪಿ ಗದ್ದೆ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಬಾಳಕುದ್ರು ಗ್ರಾಮದ ಹಂಗಾರಕಟ್ಟೆ ಸರ್ವೋದಯಾ ಯವಕ ಮಂಡಲದ ಎದುರು ಜೂ.28ರಂದು ಸಂಜೆ 5.30ರ ಸುಮಾರಿಗೆ ನಡೆದಿದೆ.

ಮೃತರನ್ನು ಸುರೇಶ್ ತಿಂಗಳಾಯ(38) ಎಂದು ಗುರುತಿಸಲಾಗಿದೆ. ಮಾಬುಕಳ ಕಡೆಯಿಂದ ಹಂಗಾರಕಟ್ಟೆ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಓಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಸುರೇಶ್ ರಸ್ತೆ ಬದಿಯ ಸುಮಾರು ಎರಡು ಅಡಿ ಆಳದ ನೀರಿನಿಂದ ತುಂಬಿರುವ ಗದ್ದೆಗೆ ವಾಹನ ಸಮೇತ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News