ಮಂಚಿ ಗ್ರಾಮದ ಕಿರು ಸೇತುವೆ ಕಾಮಗಾರಿ ಪರಿಶೀಲನೆ

Update: 2019-06-29 18:30 GMT

ಬಂಟ್ವಾಳ, ಜೂ. 29: ಮಂಚಿ ಗ್ರಾಮದ ನೂಜಿ ಆಲಬೆ 30 ಲಕ್ಷ ರೂ. ಅನುದಾನದಲ್ಲಿ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು ಗ್ರಾಮ ಸ್ಪಂದನ ಕಾರ್ಯಕ್ರಮದ ನಿಮಿತ್ತ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರು ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಸದಸ್ಯರಾದ ಕೇಶವ ರಾವ್, ಉದಯಶಂಕರ್, ಕೃಷ್ಣಪ್ಪ ಬಂಗೇರ, ಪುಷ್ಪಾ ಎಸ್.ಕಾಮತ್, ಕೆ.ಎಸ್. ಪ್ರತಿಮಾ, ಸುಮಾ , ಸುಮತಿ, ಮೋಹನ್ ಪ್ರಭು, ಮಾಜಿ ಪಂ ಸದಸ್ಯ ಗೋವಿಂದ ನಾಯಕ್, ಪಿಡಿಒ ಮಯಾ ಕುಮಾರಿ, ಕಾರ್ಯದರ್ಶಿ ರಮೇಶ್, ಕಂದಾಯ ನಿರೀಕ್ಷಕ ರಾಮ, ಪಂಚಾಯತ್ ರಾಜ್ ಇಂಜಿನಿಯರ್ ಪ್ರಸನ್ನ ಹಾಗೂ ಕುಶ ಕುಮಾರ್, ಸಣ್ಣ ನೀರಾವರಿ ಇಂಜಿನಿಯರ್ ಪ್ರಸನ್ನ, ಬೀಟ್ ಪೊಲೀಸ್ ಮೋಹನ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಬಾಲಕೃಷ್ಣ ಸೆರ್ಕಳ, ಹರೀಶ್ ಬೇಡಗುಡ್ಡೆ, ರಮೇಶ್ ರಾವ್ ಮಂಚಿ, ಹ್ಯಾರೀಶ್ ಮಂಚಿ, ಮೋಹನ್ ಪಿ.ಎಸ್.  ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News