ಕಾನ್ಪುರ: ಪ್ರತಿಭಟನೆ ಹಿನ್ನೆಲೆಯಲ್ಲಿ ‘ಆರ್ಟಿಕಲ್ 15’ ಸಿನೆಮಾ ಪ್ರದರ್ಶನ ರದ್ದು

Update: 2019-06-30 15:33 GMT

ಕಾನ್ಪುರ, ಜೂ. 30: ಸಂಘ ಪರಿವಾರದ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿ ನಿರ್ದೇಶಕ ಅನುಭವ್ ಸಿನ್ಹಾ ಅವರ ‘ಆರ್ಟಿಕಲ್ 15’ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ.

ಇಲ್ಲಿನ ಐನಾಕ್ಸ್ ಹಾಗೂ ಸಪ್ನಾ ಪ್ಯಾಲೇಸ್ ಥಿಯೇಟರ್‌ಗಳಿಗೆ ಶುಕ್ರವಾರ ಸಂಘ ಪರಿವಾರದ ಪ್ರತಿಭಟನಕಾರರು ನುಗ್ಗಿ ದಾಂಧಲೆ ನಡೆಸಿದ ಬಳಿಕ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಪ್ರತಿಭಟನಕಾರರು ಚಿತ್ರ ನಿರ್ದೇಶಕರ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಚಿತ್ರದ ಪೋಸ್ಟರ್‌ಗಳು ಹರಿದು ಹಾಕಿದರು. ಮುಂದಾಗುವ ಸಮಸ್ಯೆ ಗಮನಿಸಿ ಸಾಕಷ್ಟು ಭದ್ರತೆ ಒದಗಿಸುವ ವರೆಗೆ ಚಿತ್ರ ಪ್ರದರ್ಶಿಸದಿರಲು ನಿರ್ಧರಿಸಲಾಗಿದೆ.

 ಎಲ್ಲ ಮಲ್ಟಿಫ್ಲೆಕ್ಸ್ ಹಾಗೂ ಸಿನೆಮಾ ಮಂದಿರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಲ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾನ್ಪುರದ ಪೊಲೀಸ್ ಅಧೀಕ್ಷಕ ಅನಂತ್ ಡಿಯೋ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News