ರೈಲಿನಿಂದ ಬಿದ್ದು ಕಾಸರಗೋಡಿನ ಯುವಕ ಮೃತ್ಯು

Update: 2019-07-02 08:43 GMT

ಕಾಸರಗೋಡು: ಮುಂಬೈಯಿಂದ ಕಾಸರಗೋಡಿಗೆ ಹೋಗುತ್ತಿದ್ದ ರೈಲಿನಿಂದ ಬಿದ್ದು ಕಾಸರಗೋಡಿನ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಬೇಕಲಪಳ್ಳಿಕೆರೆ ಚೇಟುಕುಂಡುವಿನ ನಿತೀಶ್ (26) ಮೃತರು ಎಂದು ಗುರುತಿಸಲಾಗಿದೆ.

ರೈಲ್ವೆ ಹಳಿ ಪಕ್ಕ ಮೃತದೇಹ ಪತ್ತೆಯಾಗಿದ್ದು, ಪರ್ಸ್ ನಲ್ಲಿ ಲಭಿಸಿದ  ಗುರುತು ಚೀಟಿಯಿಂದ ಗುರುತು ಪತ್ತೆಯಾಗಿದ್ದು, ಗೋವಾ ಪೊಲೀಸರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಗೋವಾದಲ್ಲಿ ಮಳಿಗೆಯೊಂದರಲ್ಲಿ ದುಡಿಯುತ್ತಿದ್ದ ನಿತೀಶ್ ಮನೆಗೆ ಮರಳುತ್ತಿದ್ದಾಗ ದುರಂತ ನಡೆದಿದೆ. ಸೋಮವಾರ ಮನೆಗೆ ತಲಪುವುದಾಗಿ ಮನೆಯವರಿಗೆ ಕರೆ ಮಾಡಿದ್ದು, ರೈಲಿಂದ ಹೊರಕ್ಕೆಸೆಯಲ್ಪಟ್ಟು ದುರಂತ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಮಾಹಿತಿ  ತಿಳಿದು ಸಂಬಂಧಿಕರು ಗೋವಾಕ್ಕೆ ತೆರಳಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಊರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News