ಮಲೇಶ್ಯಾದಲ್ಲಿ ಬಂಧಿತ ಪಂಜಾಬ್ ಯುವಕನ ಬಿಡುಗಡೆಗೆ ಕೇಂದ್ರದ ನೆರವು ಕೋರಿಕೆ
Update: 2019-07-03 16:03 GMT
ಹೊಸದಿಲ್ಲಿ, ಜು.3: ಮಲೇಶ್ಯಾದ ಜೈಲಿನಲ್ಲಿರುವ ಪಂಜಾಬ್ನ ಯುವಕನ ಬಿಡುಗಡೆಗೆ ನೆರವಾಗುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಪಂಜಾಬ್ನ ಬಟಿಂಡ ಜಿಲ್ಲೆಯವರಾದ ಹರ್ಬನ್ಸ್ ಸಿಂಗ್ ಕಳೆದ ಆಗಸ್ಟ್ನಲ್ಲಿ ಪ್ರವಾಸೀ ವೀಸಾದ ಮೂಲಕ ಮಲೇಶ್ಯಾಕ್ಕೆ ತೆರಳಿದ್ದು. ಆದರೆ ಆತನನ್ನು ಅಲ್ಲಿಯ ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದು ಯಾವ ಆರೋಪದ ಮೇಲೆ ಬಂಧಿಸಿದ್ದಾರೆ ಎಂಬುದು ತಿಳಿದಿಲ್ಲ ಎಂದು ಸಿಂಗ್ನ ಕುಟುಂಬದವರು ಹೇಳಿರುವುದಾಗಿ ಅಮರೀಂದರ್ ಸಿಂಗ್ ವಿದೇಶ ವ್ಯವಹಾರ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು ಹರ್ಬನ್ಸ್ ಸಿಂಗ್ನ ಫೋಟೋ, ಆಧಾರ್ ಕಾರ್ಡ್, ಮತದಾರರ ಗುರುತುಚೀಟಿಯ ಪ್ರತಿಯನ್ನು ಪತ್ರದ ಜೊತೆ ಲಗತ್ತಿಸಿದ್ದಾರೆ.