ಕೀಟನಾಶಕ ಸೇವಿಸಿ ಮೃತ್ಯು

Update: 2019-07-03 16:51 GMT

ಬ್ರಹ್ಮಾವರ, ಜು.3: ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೀಟ ನಾಶಕ ಸೇವಿಸಿ ಮೃತಪಟ್ಟ ಘಟನೆ ಕೆಂಜೂರು ಎಂಬಲ್ಲಿ ನಡೆದಿದೆ.

ಮೃತರನ್ನು ಅಮ್ಮಣ್ಣಿ ಎಂಬವರ ಮಗ ಉದಯ ನಾಯ್ಕ(48) ಎಂದು ಗುರುತಿಸಲಾಗಿದೆ. ಕೆಂಜೂರಿನ ಉದಯ ಶೆಟ್ಟಿರವರ ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದ ಇವರು ಜು.2ರಂದು ಮಧ್ಯಾಹ್ನ ಕೋಳಿ ಫಾರಂಗೆ ಉಪಯೋಗಿ ಸುವ ಕೀಟನಾಶಕವನ್ನು ಕುಡಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಜು.3ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News