ಹೊಳೆಯಲ್ಲಿ ಮುಳುಗಿದ ಯುವತಿಯ ಮೃತದೇಹ ಪತ್ತೆ

Update: 2019-07-04 16:14 GMT

ಶಂಕರನಾರಾಯಣ, ಜು.4: ಕುಳ್ಳುಂಜೆ ಗ್ರಾಮದ ಗುಂಡುಕೊಡ್ಲು ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಯುವತಿಯೊಬ್ಬಳ ಮೃತದೇಹ ಇಂದು ಸಂಜೆ 4.30ರ ಸುಮಾರಿಗೆ ಪತ್ತೆಯಾಗಿದೆ.

ಮೃತರನ್ನು ಕುಳುಂಜೆ ಗ್ರಾಮದ ಗುಂಡುಕೊಡ್ಲು ನಿವಾಸಿ ಲಕ್ಷ್ಮಣ ನಾಯ್ಕ ಎಂಬವರ ಹಿರಿಯ ಮಗಳು ಅಮಿತಾ(21) ಎಂದು ಗುರುತಿಸಲಾಗಿದೆ. ಇವರು ಜು.3ರಂದು ರಂದು ಬೆಳಿಗ್ಗೆ ಮನೆಯ ಸಮೀಪದ ಹೊಳೆಗೆ ಬಟ್ಟೆ ತೊಳೆಯಲು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು.

ಇಡೀ ದಿನ ಹೊಳೆಯಲ್ಲಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿ ರಲಿಲ್ಲ. ಇಂದು ಸಂಜೆ ವೇಳೆ ಮೃತದೇಹ ಅಲ್ಲೇ ಸಮೀಪದ ಹೊಳೆಯಲ್ಲಿ ಪತ್ತೆ ಯಾಗಿದೆ. ಇವರು ಬಟ್ಟೆ ತೊಳೆಯುವ ವೇಳೆ ಅಕಸ್ಮಿಕವಾಗಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News