ಗಾಂಜಾ ಸೇವನೆ: ಐದು ಮಂದಿ ಬಂಧನ

Update: 2019-07-04 16:16 GMT

ಉಡುಪಿ, ಜು.4: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ಕಾರ್ಕಳ ಮಂಜರಪಲ್ಕೆ ಎಂಬಲ್ಲಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಜು.4ರಂದು ಬೆಳಗ್ಗೆ ಕೆದಿಂಜೆ ಗ್ರಾಮದ ಮಂಜರಪಲ್ಕೆ ಬಸ್ ನಿಲ್ದಾಣದ ಬಳಿ ಸಿಗರೇಟಿನಲ್ಲಿ ಸೇರಿಸಿ ಗಾಂಜಾ ಸೇವನೆ ಮಾಡಿದ ಬೆಳಗಾವಿಯ ಓಂಕಾರ್ ಮಹೇಶ್ ಪಾಟೀಲ್(20), ಕುಂಭಾಶಿಯ ಮನೋಜ್(20), ಶಿರ್ತಾಡಿಯ ಅಬ್ದುಲ್ ರಜಾಕ್(36) ಎಂಬವರನ್ನು ಬಂಧಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.2ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್ ಬಳಿ ಬೆಂಗಳೂರು ರಾಜೇಶ್ವರಿ ನಗರದ ರೋಹನ್ ವಿ.ಕುಮಾರ್(21) ಹಾಗೂ ಮಣಿಪಾಲ ವಿಧ್ಯಾರತ್ನ ಎನ್ ಕ್ಲೇವ್ ಅಪಾರ್ಟ್‌ಮೆಂಟ್ ಬಳಿ ಹರಿಯಾಣದ ಆದಿತ್ಯಾ ಕುಮಾರ್(22) ಎಂಬವರನ್ನು ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News