ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2019-07-04 16:17 GMT

ಶಿರ್ವ, ಜು.4: ಶಿರ್ವ ಹಳೆ ಚರ್ಚ್ ರೋಡ್ನ ಸಲಾಫಿ ಮಸೀದಿಯ ಬಳಿಯ ಮನೆಯೊಂದಕ್ಕೆ ಜು.3ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮೈಯ್ಯದಿ ಅಬ್ದುಲ್ ಖಾದರ್ ಎಂಬವರ ಮನೆಯ ಮಹಡಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಒಂದನೇ ಮಹಡಿಯಲ್ಲಿರುವ ಅವರ ಮಗ ಅನೀಸ್ ಎಂಬವರ ಬೆಡ್‌ರೂಮ್ನ ಕಪಾಟಿನಲ್ಲಿದ್ದ 3 ಚಿನ್ನದ ಬಳೆ, ಚಿನ್ನ ನೆಕ್ಲೆಸ್, ಚಿನ್ನದ ಹ್ಯಾಂಡ್ಸೆಟ್, ಚಿನ್ನದ ಸೊಂಟದ ಪಟ್ಟಿಗಳನ್ನು ಕಳವುಗೈದಿದ್ದಾರೆ.

ಇವುಗಳ ಒಟ್ಟು ಮೌಲ್ಯ 4,66,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News