×
Ad

ಕಾಸರಗೋಡು : ಕೆರೆಯಲ್ಲಿ ಮುಳುಗಿ ಧಾರವಾಡ ಮೂಲದ ಯುವಕ ಮೃತ್ಯು

Update: 2019-07-05 15:12 IST

ಕಾಸರಗೋಡು : ಕೆರೆಯಲ್ಲಿ ಮುಳುಗಿ ಧಾರವಾಡ ಮೂಲದ ಯುವಕನೋರ್ವ ಮೃತಪಟ್ಟ ಘಟನೆ  ಕುಂಡಂಗುಯಿಯಲ್ಲಿ ನಡೆದಿದೆ.

ಮೃತರನ್ನು ಧಾರವಾಡದ ಮಹಾಂತೇಶ್ (18) ಎಂದು ಗುರುತಿಸಲಾಗಿದೆ.

ಗುರುವಾರ ಸಂಜೆ ಕುಂಡಂಗುಯಿಯ ಕೆರೆಯಲ್ಲಿ ಸ್ನಾನಕ್ಕಿಳಿದಿದ್ದು, ನೀರಲ್ಲಿ  ಮುಳುಗಿದ್ದರು . ಜೊತೆಯಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ  ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದ್ದು, ಕೊನೆಗೆ ಅಗ್ನಿಶಾಮಕ ದಳ  ಮತ್ತು ಸ್ಥಳೀಯರ ನೆರವಿನಿಂದ ಮೃತದೇಹವನ್ನು  ಹೊರತೆಗೆಯಲಾಯಿತು.

ಕೆಲ ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕಾಸರಗೋಡಿಗೆ ತಲಪಿದ್ದ ಮಹಾಂತೇಶ್  ಕಾಸರಗೋಡು ಅಶೋಕ ನಗರದ ಬಾಡಿಗೆ  ರೂಂ  ನಲ್ಲಿ ವಾಸವಾಗಿದ್ದರು . ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು , ಮನೆಯವರಿಗೆ  ಮಾಹಿತಿ ನೀಡಲಾಗಿದೆ .

ಸಂಬಂಧಿಕರು ತಲಪಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಬಿಟ್ಟುಕೊಡಲಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News