ಬೆಳ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರಕ್ಕೆ ಡಾ. ವೀರೇಂದ್ರ ಹೆಗ್ಗಡೆ ಭೇಟಿ

Update: 2019-07-10 11:48 GMT

ಕೊಣಾಜೆ: ಕೊಣಾಜೆ ಸಮೀಪದ ಬೆಳ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿದರು.

ಈ ಸಂದರ್ಭ ಕ್ಷೇತ್ರದಲ್ಲಿ ನೆರದಿದ್ದ ಭಕ್ತರೊಂದಿಗೆ ಮಾತನಾಡಿದ ಅವರು, ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಈ ಕ್ಷೇತ್ರವು ರೂಪುಗೊಂಡಿದೆ. ಅಚ್ಚುಕಟ್ಟಾದ ಕೆಲಸ ಕಾರ್ಯದೊಂದಿಗೆ, ಉತ್ತಮವಾದ ವಾಸ್ತು ವಿನ್ಯಾಸದೊಂದಿಗೆ ಈ ಕ್ಷೇತ್ರವು ಕಂಗೊಳಿಸುತ್ತಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಶಕ್ತಿ ಕೇಂದ್ರವಾಗಿ ಈ ಕ್ಷೇತ್ರವು ಬೆಳಗಲಿ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸುರೇಂದ್ರ ರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉಮರಬ್ಬ, ಅಣ್ಣಪ್ಪ ಪಿ.ಎಸ್., ಮುಖಂಡರಾದ ಸೀತರಾಮ ಶೆಟ್ಟಿ ದಡಸ್, ರಘುರಾಮ ಕಾಜವ, ಕ್ಷೇತ್ರದ ಜೀರ್ಣೊದ್ಧಾರ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ, ಕೋಶಾಧಿಕಾರಿ ರವೀಂದ್ರ ಬಂಗೇರ, ಗೌರವ ಸಲಹೆಗಾರ ಸುದರ್ಶನ ಭಟ್, ಜೊತೆ ಕಾರ್ಯದರ್ಶಿ ಸುಂದರ ಶೆಟ್ಟಿಗಾರ್, ಹರೀಶ್ ಗಟ್ಟಿ, ದೇವಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News