ಕುಂದಾಪುರ: ರೈಲು ಬಡಿದು ಮೃತ್ಯು

Update: 2019-07-10 16:35 GMT

ಕುಂದಾಪುರ, ಜು.10: ಮಂಗಳೂರಿನಿಂದ ಕಾರವಾರದ ಕಡೆಗೆ ಹೋಗುತಿದ್ದ ರೈಲು ಬಡಿದು ಹಳಿಯ ಬದಿ ನಡೆದುಕೊಂಡು ಹೋಗುತಿದ್ದ ವೃದ್ಧರೊಬ್ಬರು ಮೃತಪಟ್ಟ ಘಟನೆ ಕಾಳಾವರ ಗ್ರಾಮದಲ್ಲಿ ಮಂಗಳವಾರ ಅಪರಾಹ್ನ ನಡೆದಿದೆ. ಮೃತರನ್ನು ವಿಠಲ ದೇವಾಡಿಗ (62) ಎಂದು ಗುರುತಿಸಲಾಗಿದೆ.

ವಿಠಲ ದೇವಾಡಿಗ ಅವರು ನಿನ್ನೆ ಬೆಳಗ್ಗೆ 10:30ಕ್ಕೆ ಕಾಳಾವರ ಪೇಟೆಗೆಂದು ಹೋದವರು ಅಪರಾಹ್ನ 2 ಗಂಟೆ ಸುಮಾರಿಗೆ ಮನೆಗೆ ಮರಳುತಿದ್ದಾಗ ಕಾಳಾವರ ಪೇಟೆಯಿಂದ ಕಂದಾವರ ಗ್ರಾಮದ ಸಾಂತಾವರ ಮನೆಯ ಹತ್ತಿರದ ರೈಲ್ವೆ ಹಳಿಯ ಬಳಿ ನಡೆದುಕೊಂಡು ಹೋಗುತಿದ್ದಾಗ ರೈಲಿಗೆ ಸಿಲುಕಿ ತೀವ್ರ ಸ್ವರೂಪದ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತರಿಗೆ ಕಿವಿ ಕೇಳಿಸದೇ ಇದ್ದು, ಮೂಗರಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News