ಜುವೆಲ್ಲರಿಗೆ ನುಗ್ಗಿ ಕಳ್ಳತನ

Update: 2019-07-10 16:37 GMT

ಬೈಂದೂರು, ಜು.10: ಯಡ್ತರೆ ಗ್ರಾಮದ ರಮೇಶ್ ಶೇಟ್ ಎಂಬವರ ಉಪ್ಪುಂದದಲ್ಲಿರುವ ದುರ್ಗಾಪರಮೇಶ್ವರಿ ಜುವೆಲ್ಲರಿ ಅಂಗಡಿಗೆ ನಿನ್ನೆ ಸಂಜೆ 6:30ರಿಂದ ಇಂದು ಬೆಳಗ್ಗೆ 9:30ರ ನಡುವಿನ ಅವಧಿಯಲ್ಲಿ ನುಗ್ಗಿದ ಕಳ್ಳರು ಸುಮಾರು 78,800ರೂ. ಮೊತ್ತದ 1970 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಅಂಗಡಿ ಹಿಂಬದಿಯ ಮರದ ಕಿಟಕಿಯನ್ನು ಮುರಿದು ಅಂಗಡಿಯ ಒಳ್ಳೆಯ ನುಗ್ಗಿ ಅಂಗಡಿಯಲ್ಲಿದ್ದ ಬೆಳ್ಳಿಯ ಕರಿಮಣಿ ಸರ-8, ರುದ್ರಾಕ್ಷಿ ಮಣಿಸರ-4, ಬೆಳ್ಳಿ ಸರಗಿ-250ಗ್ರಾಂ, ಕಾಲುದೀಪ-4, ಕಾಲು ಸರಿಗೆ-6, ಆಮೆ ಉಂಗುರ-20, ಬೆಳ್ಳಿ ನೆಕ್ಲೇಸ್-2, ಬೆಳ್ಳಿ ಬೆಂಡೋಲೆ-10ಜೊತೆ, ಕಾಲುಚೈನ್-10ಜೊತೆ, ಬ್ರಾಸ್ಲೆಟ್-10, ಕಾಲುಂಗುರ-20ಜೊತೆ ಕಳವಾದ ವಸ್ತುಗಳಲ್ಲಿ ಸೇರಿವೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News