ಚಿನ್ನದ ಸರ ಅಪಹರಣ

Update: 2019-07-10 16:40 GMT

ಗಂಗೊಳ್ಳಿ, ಜು.10: ನೂಜಾಡಿಯ ಕಲ್ಪನಾ ಎಂಬವರು ಇಂದು ಬೆಳಗ್ಗೆ 9:45ರ ಸುಮಾರಿಗೆ ಬಗ್ವಾಡಿ ಬಾಲು ಡೈರಿಯಲ್ಲಿ ಕೆಲಸಕ್ಕೆಂದು ಮನೆಯಿಂದ ನಡೆದುಕೊಂಡು ಹೋಗುತಿದ್ದಾಗ, ಹೊಟ್ಲಬೈಲು ಎಂಬಲ್ಲಿ ಬಗ್ವಾಡಿ ಕ್ರಾಸ್‌ನಿಂದ ವಂಡ್ಸೆ ಕಡೆಗೆ ಹೋಗುತಿದ್ದ ಮೋಟಾರು ಸೈಕಲ್ ಸವಾರರು ಹಾಗೂ ಸಹ ಸವಾರರು, ರಸ್ತೆಯ ಮಾಹಿತಿ ಕೇಳುವ ನೆಪದಲ್ಲಿ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಚೈನ್ ಹಾಗೂ ಮೊಬೈಲ್‌ನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕಲ್ಪನಾ ಅವರು ವಂಡ್ಸೆಗೆ ತೆರಳುವ ರಸ್ತೆ ಕುರಿತು ಮಾಹಿತಿ ನೀಡುತಿದ್ದಾಗ, ಚಿನ್ನದ ಚೈನ್ ಹಾಗೂ ಮೊಬೈಲ್‌ನ್ನು ಕಿತ್ತುಕೊಂಡು ದೂಡಿ ಹಾಕಿ ವಂಡ್ಸೆಯತ್ತ ಪರಾರಿಯಾಗಿದ್ದಾರೆಂದು ಕಲ್ಪನಾ ಗಂಗೊಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮೀ ಪೆಡೆಂಟ್ ಇರುವ ಚಿನ್ನದ ಚೈನ್ ಎಂಟು ಗ್ರಾಮ ಇದ್ದು ಅಂದಾಜು ಮೌಲ್ಯ 30,000 ರೂ. ಹಾಗೂ ಮೊಬೈಲ್ ಬೆಲೆ 13,000 ರೂ.ಗಳೆಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News