ಗಾಯಕಿ ಪವಿತ್ರಾ ಶ್ರೀಧರ ನಾಯ್ಕ್ ಗೆ ಕರ್ನಾಟಕ ಯುವಗಾನ ಶಾರದೆ ಅವಾರ್ಡ್

Update: 2019-07-10 17:11 GMT

ಭಟ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಗುಮ್ಮಟ ಉತ್ಸವ 2019 ಹಾಗೂ  ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ  ತಾಲೂಕಿನ ಗಾಯಕಿ ಪವಿತ್ರಾ ಶ್ರೀಧರ ನಾಯ್ಕ ಈಕೆಗೆ ಕರ್ನಾಟಕ ಯುವಗಾನ ಶಾರದೆ ಅವಾರ್ಡನ್ನು ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಪವಿತ್ರ ನಾಯ್ಕ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದು ನನಗೆ ದೊರೆತ ಪ್ರಶಸ್ತಿಯನ್ನು ಅತ್ಯಂತ ಸಂತಸದಿಂದ ಸ್ವೀಕರಿಸಿದ್ದೇನೆ.   ನಾನು ಸಂಗೀತ ಲೋಕದಲ್ಲಿ ಇನ್ನು ಎತ್ತರಕ್ಕೆ ಬೆಳೆಯ ಬೇಕು ಎನ್ನುವ ಆಸೆಯನ್ನು ಹೊಂದಿದ್ದು ಎಲ್ಲರ ಸಹಕಾರ ಬೇಕು ಎಂದು ಕೋರಿದರು.

ಈಗಾಗಲೇ ಅನೇಕ ಕಡೆಗಳಲ್ಲಿ ಸಂಗೀತದ ಕಾರ್ಯಕ್ರಮ ನೀಡಿ ಜನರ ಪ್ರಸಂಸೆಗೆ ಪಾತ್ರವಾಗಿದ್ದ ಇವರು ಚಂದನ ವಾಹಿನಿಯ  ಗಾನ ಚಂದನ  ಮಧುರ ಮಧುರವೀ ಮಂಜುಳ ಗಾನ,  ಕಲರ್ಸ ಕನ್ನಡ ವಾಹಿನಿಯ ಕನ್ನಡ ಕೋಗಿಲೆ,  ಝಿ ಕನ್ನಡ ವಾಹಿನಿಯ ಸರಿಗಮಪ  ಮುಂತಾದ ಕಾರ್ಯಕ್ರಮದಲ್ಲಿ  ಭಾಗವಹಿಸಿ  ವಿವಿದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದನ್ನು ಸ್ಮರಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News