ಮೈಥಿಲಿ ಶ್ರೀರಾಮ್‌ಗೆ ‘ಕಲ್ಕೂರ ವಿದ್ಯಾರ್ಥಿಸಿರಿ’ ಪ್ರಶಸ್ತಿ ಪ್ರದಾನ

Update: 2019-07-10 17:22 GMT

ಮಂಗಳೂರು, ಜು.10: ಪ್ರತಿಷ್ಠಿತ ‘ಮೂಕ್ಸ್’ ಕೋರ್ಸ್‌ನ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇಗರ್ಡೆಗೊಂಡಿರುವ ಮೈಥಿಲಿ ಶ್ರೀರಾಮ್‌ಗೆ ಕಲ್ಕೂರ ಪ್ರತಿಷ್ಠಾನದಿಂದ ‘ಕಲ್ಕೂರ ವಿದ್ಯಾರ್ಥಿ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂಗಳೂರು ನಗರದ ಕದ್ರಿಯ ‘ಮಂಜುಪ್ರಸಾದ’ದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಮೈಥಿಲಿ ಅವರನ್ನು ಗೌರವಿಸಿದರು.

ಈ ಸಂದರ್ಭ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ವಿನೋದಾ ಪಿ. ಕಲ್ಕೂರ, ಎಂ.ಬಿ. ಪುರಾಣಿಕ್, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಶರವು ರಾಘವೇಂದ್ರ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News