ಯಡಮೊಗ್ಗೆಯಲ್ಲಿ ಅಪಹರಣವಾಗಿದ್ದ ಮಗುವಿನ ಮೃತದೇಹ ಹೊಳೆಯಲ್ಲಿ ಪತ್ತೆ

Update: 2019-07-12 10:08 GMT

ಶಂಕರನಾರಾಯಣ, ಜು.12: ಯಡಮೊಗ್ಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜು.11ರಂದು ಬೆಳಗಿನ ಜಾವ 4.30ರ ಸುಮಾರಿಗೆ ಮನೆ ಒಳಗಿನಿಂದ ಅಪಹರಣಕ್ಕೀಡಾದ ಮಗುವಿನ ಮೃತದೇಹವು ಇಂದು ಮನೆ ಸಮೀಪದ ಕುಬ್ಜ ಹೊಳೆಯಲ್ಲಿ ಪತ್ತೆಯಾಗಿದೆ.

ಮಗುವನ್ನು ಅಪಹರಿಸಿರುವ ವ್ಯಕ್ತಿಯೇ ಮಗುವನ್ನು ಹೊಳೆಗೆ ಎಸೆದು ಕೊಲೆ ಮಾಡಿರಬಹುದೆ ಅಥವಾ ಇದರಲ್ಲಿ ಬೇರೆ ಕಾರಣ ಇರಬಹುದೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News