ಮುಲ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ, ಚಾಲಕ ಪಾರು

Update: 2019-07-12 14:23 GMT

ಮುಲ್ಕಿ:  ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಟ್ರಾನ್ಸ್ ಪಾರ್ಮಾರ್'ಗೆ ಢಿಕ್ಕಿ ಹೊಡೆದು ರಸ್ತೆ ಬದಿ ಗುಂಡಿಗೆ ಉರುಳಿದ ಘಟನೆ ಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ ಕ್ಷೀರ ಸಾಗರದ ಬಳಿ ನಡೆದಿದೆ.

ಮಂಗಳೂರಿನಿಂದ ಉದ್ಯಾವರ ಕಡೆ ತೆರಳುತ್ತಿದ್ದ ಕಾರು ಸಂಜೆ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ತುಂಬಿನಿಂತ ನೀರಿನಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್'ಗೆ ಬಡಿದು ಬಳಿಕ ರಸ್ತೆ ಬದಿ ಸುಮಾರು ಐವತ್ತು ಅಡಿ ಗುಂಡಿಗೆ ಬಿದ್ದಿದೆ. ಗಾಯಗೊಂಡ ಚಾಲಕನ್ನನ್ನು ಮೇಲೆತ್ತಿದ ಸ್ಥಳೀಯರು ಪಡುಬಿದ್ರೆಯ ಅಸ್ಪತ್ರೆಗೆ ದಾಖಲಿಸಲಾಯಿತು.

ಕಾರು ಚಾಲಕ ಉದ್ಯಾವರದ ಪ್ರವೀನ್ ಎಂದು ತಿಳಿದುಬಂದಿದೆ.

ಘಟನೆಯಿಂದ ಟ್ರಾನ್ಸ್ ಫಾರ್ಮರ್ ಸೇರಿದಂತೆ ಮೂರು ವಿದ್ಯುತ್ ಕಂಬಗಳು ಮುರಿದು ಬಿದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಾಯದಿಂದ ವಿದ್ಯುತ್ ತಂತಿಗಳನ್ನು ಪ್ರತ್ಯೇಕಿಸಿ ರಸ್ತೆ ತೆರವುಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News