ಉತ್ತರಕೊಪ್ಪದಲ್ಲಿ ಸಿಲಿಂಡರ್ ಸ್ಪೋಟ; ಓರ್ವನಿಗೆ ಗಂಭೀರ ಗಾಯ

Update: 2019-07-12 14:50 GMT

ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಉತ್ತರ ಕೊಪ್ಪ ಎಂಬಲ್ಲಿ ಗುರುವಾರ ರಾತ್ರಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಮನೆಯ ಸಂಪೂರ್ಣವಾಗಿ ದ್ವಂಸಗೊಂಡಿದೆ. 

ಸಿಲಿಂಡರ್ ಸ್ಪೋಟಕ್ಕೆ ಗಾಯಗೊಂಡ ವ್ಯಕ್ತಿಯನ್ನು ಉತ್ತರಕೊಪ್ಪದ ನಿವಾಸಿ ಅನೀಸ್ ಆಂಟೋನಿ ಎಂದು ಗುರುತಿಸಲಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪುರಸಭೆ ಸದಸ್ಯ ಪಾಸ್ಕಲ್ ಗೋಮ್ಸ್ ಮಾಹಿತಿ ನೀಡಿದ್ದಾರೆ.

ಆಂಟೋನಿ ದಿನಗೂಲಿ ಮಾಡಿಕೊಂಡು ಕುಟುಂಬವನ್ನು ನಡೆಸುತ್ತಿದ್ದು ಇವರಿಗೆ ತಾಲೂಕಾಡಳಿತ ಹಾಗೂ ಭಾರತ್ ಗ್ಯಾಸ್ ಕಂಪನಿಯು ಪರಿಹಾರ ನೀಡಿ ಚಿಕಿತ್ಸೆಗೆ ಸಹಕಾರಿಯಾಗಬೇಕೆಂದು ಅವರೂ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ಗ್ರಾಮಲೆಕಾಧಿಕಾರಿ ಹಾಗೂ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ತಹಶೀಲ್ದಾರ್ ಕಚೇರಿಗೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News