ಬೆಳ್ತಂಗಡಿ : ಶ್ರೀಗಂಧದ ದಾಸ್ತಾನು ಕೊಠಡಿಯಿಂದ ಶ್ರೀಗಂಧ ಕಳವು

Update: 2019-07-13 16:11 GMT

ಬೆಳ್ತಂಗಡಿ : ಶ್ರೀಗಂಧದ ದಾಸ್ತಾನು ಕೊಠಡಿಯಿಂದಲೇ ಸುಮಾರು 15 ಲಕ್ಷ ರೂ. ಮೌಲ್ಯದ ಶ್ರೀಗಂಧ ಕಳವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಅರಣ್ಯ ಇಲಾಖೆಯವರು ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧವನ್ನು ವಶಕ್ಕೆ ಪಡೆದು ಬೆಳ್ತಂಗಡಿಯ ಕಾಲೇಜಿನ ಬಳಿ ಇರುವ ಗೋಡೌನ್‍ನಲ್ಲಿ ಇಟ್ಟಿದ್ದು, ಇದೀಗ ಅಲ್ಲಿದ್ದ ಸುಮಾರು 15 ಲಕ್ಷ ರೂ. ಮೌಲ್ಯದ 350 ಕೆ.ಜಿ. ಶ್ರೀಗಂಧ ನಾಪತ್ತೆಯಾಗಿದೆ. ಒಂದು ವಾರದ ಮೊದಲೇ ಈ ಕಳ್ಳತನ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ., ಎಸ್‍ಐ ರವಿ ಬಿ.ಎಸ್., ಐಎಸ್‍ಐ ಕಲೈಮಾರ್, ಬೆಳ್ತಂಗಡಿ ಉಪವಲಯ ಅರಣ್ಯಾಧಿಕಾರಿ ಸುಬ್ಬ ನಾಯ್ಕ್ ಭೇಟಿ ನೀಡಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News