ಮುಲ್ಕಿ: ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮುಹಲ್ಲಿಂ ಒಕ್ಕೂಟ ಕರೆ

Update: 2019-07-13 17:56 GMT

ಮುಲ್ಕಿ: ಸುರತ್ಕಲ್ ರೇಂಜ್ ಮುಹಲ್ಲಿಂ ಒಕ್ಕೂಟದ ಮಹಾಸಭೆ ಮತ್ತು ಹಾಜಿಗಳಿಗೆ ಬೀಳ್ಕೊಡುಗೆ ಸಮಾರಂಭ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯಲ್ಲಿ ಮುಫತ್ತಿಷ್ ರಶೀದ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ  ಜರಗಿತು.

ಬೊಳ್ಳೂರು ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಜ್ ಕರ್ಮ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದ್ದು ಅದನ್ನು ನಿರ್ವಹಿಸಲು‌ ಅನುಗ್ರಹ ಬೇಕಾಗಿದೆ. ಪ್ರಾರ್ಥನೆಗೆ ಉತ್ತರ ಲಭಿಸುವ ಪುಣ್ಯ ಸ್ಥಳಗಳಲ್ಲಿ ಎಲ್ಲಾ ಮಾನವ ಕುಲದ ಹಿತಕ್ಕಾಗಿ ದೇವರಲ್ಲಿ ಮೊರೆ ಇಡುವಂತೆ ಹಾಜಿಗಳಲ್ಲಿ ಮನವಿ ಮಾಡಿದರು.

ಜುಮಾ ಮಸೀದಿಯ ಮುದರ್ರಿಸ್  ಯಸ್ ಬಿ ದಾರಿಮಿ ಪ್ರಾಸ್ತಾವಿಕವಾಗಿ  ಮಾತನಾಡಿದರು.

ವಾಗ್ಮಿ ಮೌಲಾನ ಯು ಕೆ ದಾರಿಮಿ ಚೊಕ್ಕಬೆಟ್ಟು, ಮುದರ್ರಿಬ್ ಮುಝಮ್ಮಿಲ್ ಪೈಝಿ ಕೇರಳ, ಮೇನೇಜ್ ಮೆಂಟ್ ಅ ಕ್ಷ ಇಕ್ಬಾಲ್ ಅಹ್ಮದ್,ಉಸ್ಮಾನ್ ಅಬ್ದುಲ್ಲ ಸೂರಿಂಜೆ ಮೊದಲಾದವರು ಮಾತನಾಡಿದರು.
ಇದೇ ವೇಳೆ ಈ ವರ್ಷ ಹಜ್ ಗೆ ತೆರಳಲಿರುವ ಜಿಲ್ಲಾ ಮೇನೇಜ್ ಮೆಂಟ್ ಅದ್ಯಕ್ಷ ಐ ಮೊಯಿದಿನಬ್ಬ ಹಾಜಿ,ಚೊಕ್ಕಬೆಟ್ಟು ಅಝೀಝ್ ದಾರಿಮಿ ,ಅಬ್ದುಲ್ಲ ದಾರಿಮಿ ಬೈತಡ್ಕ ಮುಝಮ್ಮಿಲ್ ಪೈಝಿ ಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಇಸ್ಮಾಯಿಲ್ ದಾರಿಮಿ ಖತೀಬ್  ಕಾರ್ನಾಡು 
ರೇಂಜ್ ಮೇನೇಜ್ ಮೆಂಟ್ ಕೋಶಾಧಿಕಾರಿ ಅಹ್ಮದ್ ಬಾವ ,ಇಂತಿಯಾಝ್ ಇಡ್ಯಾ,ಇಬ್ರಾಹಿಂ ಕಾರ್ನಾಡ್,ಅಬೂಬಕರ್ ಇಡ್ಯಾ ಮೊದಲಾದವರು ಉಪಸ್ಥಿತರಿದ್ದರು .ರೇಂಜ್ ಕಾರ್ಯದರ್ಶಿ ಹನೀಫ್ ದಾರಿಮಿ ಸ್ವಾಗತಿಸಿ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News