ಮೆಲ್ಕಾರಿನಲ್ಲಿ ಆರ್.ಆರ್. ಮೆಟರ್ನಿಟಿ, ಜನರಲ್ ಆಸ್ಪತ್ರೆ ಕಾರ್ಯಾರಂಭ

Update: 2019-07-14 12:05 GMT

ಬಂಟ್ವಾಳ, ಜು. 14: ಮೆಲ್ಕಾರಿನಲ್ಲಿರುವ ಆರ್.ಆರ್. ಕಮರ್ಷಿಯಲ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ಆರ್.ಆರ್. ಮೆಟರ್ನಿಟಿ ಮತ್ತು ಜನರಲ್ ಆಸ್ಪತ್ರೆ ಕಾರ್ಯಾರಂಭಗೊಂಡಿದೆ.

ರವಿವಾರ ಮಂಗಳೂರಿನ ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಎಚ್.ಟಿ. ಮನೋರಮಾ ರಾವ್ ಉದ್ಘಾಟಿಸಿ, "ಮೆಲ್ಕಾರ್ ನಂಥ ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಆಸ್ಪತ್ರೆಯೊಂದರ ಅವಶ್ಯಕತೆ ಇದ್ದು, ಮಂಗಳೂರಿನವರೆಗೆ ಬರುವ ಶ್ರಮ, ಸಮಯ ಉಳಿತಾಯ ಮಾಡುತ್ತದೆ. ಸ್ಥಳೀಯರಿಗೆ ಇದರ ಪೂರ್ಣ ಪ್ರಯೋಜನ ದೊರಕಲಿ" ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಹಳ್ಳಿಯ ಜನರಿಗೆ ಸೌಲಭ್ಯಗಳನ್ನು ಒದಗಿಸುವ ಈ ಆಸ್ಪತ್ರೆಯಿಂದ ಸಮಸ್ಯೆಯಿಂದ ಬರುವ ಜನರಿಗೆ ಸಾಂತ್ವನ ದೊರಕುವಂತಾಗಲಿ. ಗರ್ಭಿಣಿಯರಿಗೆ ಸಾಂತ್ವನ, ಕೌನ್ಸೆಲಿಂಗ್ ಕೂಡ ಅಗತ್ಯವಿದ್ದು, ಈ ಕೆಲಸ ವೈದ್ಯರಿಂದಾಗಬೇಕು, ಆಪರೇಷನ್‍ಗೆ ಆದ್ಯತೆ ನೀಡದೆ ಸುಲಭ ಹೆರಿಗೆಯಾಗುವ ನಿಟ್ಟಿನಲ್ಲಿ ವೈದ್ಯಕೀಯ ವ್ಯವಸ್ಥೆ ಒದಗಿಬರಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ವೈದ್ಯರ ಮೇಲೆ ಜನರಿಗೆ ವಿಶ್ವಾಸ ಮೂಡುವಂಥ ಕಾರ್ಯವಾಗಲಿ, ಮೇಲ್ಕಾರ್ ಈಗ ಪ್ರಮುಖ ಕೇಂದ್ರವಾಗಿ ಬೆಳೆದಿದ್ದು, ಆಸ್ಪತ್ರೆಗೆ ಸಹಕಾರಿ ಆಗಲಿದೆ. ತುರ್ತು ಸೇವೆಗಳನ್ನು ಒದಗಿಸಲು ಇದರಿಂದ ಸಾಧ್ಯ ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ವೈದ್ಯ ಡಾ. ಪ್ರಭಾಕರ ರಾವ್ ಶುಭ ಹಾರೈಸಿದರು.

ಆರ್.ಆರ್. ಸಂಸ್ಥೆಗಳ ಮುಖ್ಯಸ್ಥ ಎಂ.ರಾಮರಾಜ ರಾವ್, ಲತಾ ರಾವ್, ಆರ್. ರುದ್ರ ರಾವ್, ಅನ್ನಪೂರ್ಣ ಎಂ, ಆರ್. ಕಾವ್ಯರಶ್ಮಿ ರಾವ್, ಡಾ. ರಿತೇಶ್ ಎಸ್.ಕೆ. ಈ ಸಂದರ್ಭ ಉಪಸ್ಥಿತರಿದ್ದರು.

ಉತ್ತಮ ಸೇವೆ ಸಲ್ಲಿಸಲು ಸುಧಾರಿತ ತಂತ್ರಜ್ಞಾನ

ಗ್ರಾಮೀಣ ಜನತೆಗೆ ಗುಣಮಟ್ಟ, ವಿಶ್ವಾಸಾರ್ಹ ಮತ್ತು ಕೈಗೆಟಕುವ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಆರ್.ಆರ್. ಹೆರಿಗೆ ಮತ್ತು ಜನರಲ್ ಆಸ್ಪತ್ರೆ ಬಂಟ್ವಾಳ ತಾಲೂಕಿನ ಮೆಲ್ಕಾರ್‍ನಲ್ಲಿ ಹೊಸ ವೈದ್ಯಕೀಯ ಕೇಂದ್ರ ತೆರೆಯುತ್ತಿದ್ದು, ಆಸ್ಪತ್ರೆಯು ಉತ್ತಮ ಸೇವೆ ಸಲ್ಲಿಸಲು ಸುಧಾರಿತ ತಂತ್ರಜ್ಞಾನ ಹೊಂದಿದೆ.

ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ಬಂಜೆತನ, ಲ್ಯಾಪರೊಸ್ಕೋಪಿಕ್ ಸರ್ಜರಿ, ಪೀಡಿಯಾಟ್ರಿಕ್ಸ್, 3ಡಿ ಅಲಾóಸೌಂಡ್ ವಿತ್ ಕಲರ್ ಡಾಪ್ಲರ್, ಜನರಲ್ ಸರ್ಜರಿ, ಆರ್ಥೋಪೆಡಿಕ್ಸ್ ಮತ್ತು ಜನರಲ್ ಮೆಡಿಸಿನ್ ಸೇವೆಗಳಿವೆ. ಸುಸಜ್ಜಿತ ಪ್ರಯೋಗಾಲಯ ಮತ್ತು ಫಾರ್ಮಸಿಯೂ ಇದೆ. ಆಧುನಿಕ ಆಪರೇಷನ್ ಥಿಯೇಟರ್‍ನೊಂದಿಗೆ ಎಚ್ಪಿಎ ಫಿಲ್ಟರ್‍ಗಳು ಮತ್ತು ಆರ್ ಒ ಎಂಜಿನಿಯರಿಂಗ್ ಶುದ್ಧೀಕರಿಸಿದ ನೀರಿನ ವ್ಯವಸ್ಥೆಯೊಂದಿಗೆ 24 ಗಂಟೆಗಳ ಬಿಸಿನೀರಿನ ಸೌಲಭ್ಯ ಒದಗಿಸುತ್ತದೆ. ಪೂರ್ಣ ಕಾಲಿಕ ವೈದ್ಯರಾಗಿ ಡಾ. ಆರ್. ಕಾವ್ಯ ರಶ್ಮಿ ರಾವ್ ಮತ್ತು ಡಾ. ರಿತೇಶ್ ಎಸ್.ಕೆ. ಸೇವೆ ನೀಡಲಿದ್ದಾರೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಎಂ.ರಾಮರಾಜ ರಾವ್ ತಿಳಿಸಿದರು.

ಸಂಪೂರ್ಣ ಎಸಿ ಕೊಠಡಿ ಮತ್ತು ಶಸ್ತ್ರಚಿಕಿತ್ಸೆ ಬಳಿಕ ರೋಗಿಗೆ ಪ್ರತ್ಯೇಕ ವಾರ್ಡ್ ಹೊಂದಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯು ಐವಿಎಫ್ ಕೇಂದ್ರ ತೆರೆಯಲು ಯೋಜನೆ ರೂಪಿಸಿದೆ, ತಜ್ಞ ವೈದ್ಯರಾದ ಡಾ. ಆರ್. ಕಾವ್ಯರಶ್ಮಿ ರಾವ್ ಅವರು ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡಮಿಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಎಸ್. ಪದವಿಯನ್ನು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ನಿಟ್ಟೆ ವಿವಿಯಲ್ಲಿ ಪೂರ್ಣಗೊಳಿಸಿದ್ದಾರೆ. ಚೆನ್ನೈಯ ಸೆಲ್ವಿ ಸ್ಕೂಲ್ ಆಫ್ ಸೋನಾಲಜಿಯಲ್ಲಿ ಭ್ರೂಣ ಸಂಬಂಧಿ ಔಷಧ ವಿಚಾರದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

ಡಾ. ರಿತೇಶ್ ಎಸ್.ಕೆ. ಅವರು ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿ ನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಧಾರವಾಡ ಎಸ್‍ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಆಸ್ಪತ್ರೆಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಎಸ್. ಪದವಿ ಪಡೆದಿದ್ದಾರೆ.

ಬೆಂಗಳೂರಿನ ರಾಧಾಕೃಷ್ಣ ಆಸ್ಪತ್ರೆ ಯಿಂದ ಸಂತಾನೋತ್ಪತ್ತಿಗೆ ಅವಶ್ಯ ಔಷಧ (ಐವಿಎಫ್)ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News