ಮಾರ್ಪಳ್ಳಿಯಲ್ಲಿ ಕಂಡೊಡೊಂಜಿ ದಿನ ಕಾರ್ಯಕ್ರಮ

Update: 2019-07-14 15:12 GMT

ಉಡುಪಿ, ಜು.14: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಗ್ರಾಮದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಂಡೊಡೊಂಜಿ ದಿನ ಕಾರ್ಯಕ್ರಮವನ್ನು ಮಾರ್ಪಳ್ಳಿ ಗರೋಡಿಯ ಬಳಿ ರವಿವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಹಿರಿಯ ಕೃಷಿಕ ಪ್ರಭಾಕರ ರಾವ್ ಮಾರ್ಪಳ್ಳಿ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಸುರೇಶ್ ಜಿ.ದೇವಾಡಿಗ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಅರಣ್ಯಾಧಿಕಾರಿ ದೇವರಾಜ್ ಪಾಣ ಮಾತನಾಡಿದರು.

ಚೆನ್ನಿ ಪೂಜಾರ್ತಿ ಮಾರ್ಪಳ್ಳಿ, ಮಂಡಳಿಯ ಗೌರವಾಧ್ಯಕ್ಷ ಶಂಕರ್ ಜಿ.ದೇವಾ ಡಿಗ, ಮಾರ್ಪಳ್ಳಿ ಗೆಳೆಯರ ಬಳಗದ ಅಧ್ಯಕ್ಷ ಪಾಂಡುರಂಗ ನಾಯ್ಕ, ನಂದ ಗೋಕುಲ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ತಂತ್ರಿ, ಶ್ರೀಮಹಾಲಿಂಗೇಶ್ವರ ಚಂಡೆ ಬಳಗದ ಅಧ್ಯಕ್ಷ ವೇದವ್ಯಾಸ ತಂತ್ರಿ, ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಸದಾಶಿವ ಶೆಟ್ಟಿ, ಅನಂತ ಪದ್ಮನಾಭ ಬಳಗದ ಅಧ್ಯಕ್ಷ ಹರೀಶ್ಚಂದ್ರ ಭಟ್, ಮಹಿಲಾ ಮಂಡಳಿಯ ಅಧ್ಯಕ್ಷೆ ಲಲಿತ ವಿ.ಶೆಟ್ಟಿಗಾರ್, ನಂದಗೋಕುಲ ಮಹಿಳಾ ಮಂಡಳಿಯ ಅಧ್ಯಕ್ಷೆ ಅಂಜಲಿ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಮಾಧವ ಪೂಜಾರಿ, ಪ್ರಭಾಕರ ರಾಲ್, ಗೋಂಕ್ರ ನಾಯ್ಕ, ಕೃಷ್ಣ ನಾಯ್ಕ, ಮಧುಸೂದನ್ ಭಟ್, ನವೀನ್ ಚಂದ್ರ ಶೆಟ್ಟಿ, ಮಾಧವ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕೂಟದಲ್ಲಿ ವಾಲಿಬಾಲ್, ಓಟ, ಹಿಮ್ಮುಖ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News