ದ.ಕ. ಜಿಲ್ಲಾ ದಲಿತ ಸಂಘರ್ಷ ಹೋರಾಟ ಸಮಿತಿಯಿಂದ ಧರಣಿ

Update: 2019-07-14 15:24 GMT

ಮಂಗಳೂರು, ಜು.14: ಸಂಪ್ಯ ಠಾಣಾ ಪೊಲೀಸರು ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಕೆಯ ತಂದೆ-ತಾಯಿಗೆ ದೌರ್ಜನ್ಯ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ದ.ಕ. ಜಿಲ್ಲಾ ದಲಿತ ಸಂಘರ್ಷ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ, ಆದಿ ದ್ರಾವಿಡ ಸಮಾಜ ಸಂಘದ ಶಿವಾನಂದ ಬಳ್ಳಾಲ್‌ಬಾಗ್, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ದಲಿತ ಮುಖಂಡರಾದ ಗಿರಿಯಪ್ಪ, ಜನಾರ್ದನ, ಇಶುಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News