​ಬೈರಂಪಳ್ಳಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ: ಆರೋಪಿ ರಕ್ಷಕ್ ಬಂಧನ, ಮತ್ತೋರ್ವನಿಗಾಗಿ ಶೋಧ

Update: 2019-07-14 16:02 GMT

ಹಿರಿಯಡ್ಕ, ಜು.14: ಖಾಸಗಿ ಬಸ್ ನಿರ್ವಾಹಕ, ಬೈರಂಪಳ್ಳಿ ಗ್ರಾಮದ ದೂಪದಕಟ್ಟೆಯ ಹುಣ್ಸೆಬಾಕೇರ್ ನಿವಾಸಿ ಪ್ರಶಾಂತ್ ಪೂಜಾರಿ (37) ಕೊಲೆ ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಕುಕ್ಕೆಹಳ್ಳಿಯ ಬುಕ್ಕಿಗುಡ್ಡೆ ನಿವಾಸಿ ರಕ್ಷಕ್ ಪೂಜಾರಿ (19) ಬಂಧಿತ ಆರೋಪಿ. ಇನ್ನೊರ್ವ ಆರೋಪಿ ಪೆರ್ಡೂರು ಆಲಂಗಾರು ನಿವಾಸಿ ಸಚಿನ್ ನಾಯ್ಕೊ (24) ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದ ತಂಡ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ರಕ್ಷಕ್‌ನನ್ನು ಹೆಬ್ರಿ ರಸ್ತೆಯಲ್ಲಿ ಇಂದು ಸಂಜೆ ವೇಳೆ ಬಂಧಿಸಿದೆ. ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ನಾಳೆ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೊಸೈಟಿ ಸಾಲದ ಕಂತು ಪಾವತಿಸದ ವಿಚಾರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಪ್ರಶಾಂತ್ ಪೂಜಾರಿಯನ್ನು ಆರೋಪಿಗಳು ಜು.11ರಂದು ಮಧ್ಯ ರಾತ್ರಿ ಅವರ ಮನೆಯ ಎದುರೇ ಕತ್ತಿಯಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News