ಒಳಚರಂಡಿ ಕೊಳವೆ ದುರಸ್ಥಿ: ದ್ವಿಮುಖ ಸಂಚಾರಕ್ಕೆ ಅವಕಾಶ

Update: 2019-07-16 14:53 GMT

ಉಡುಪಿ, ಜು.16: ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕದಿಂದ ಅಂಬಾಗಿಲು ಕಡೆಗೆ ಹೋಗುವ ರಸ್ತೆಯಲ್ಲಿ ಸಿಂಡಿಕೇಟ್ ಎಟಿಎಂ ಎದುರು ರಸ್ತೆ ಅಗೆದು ಒಳಚರಂಡಿ ಕೊಳವೆ ದುರಸ್ಥಿ ಪಡಿಸಬೇಕಾಗಿರುವುದರಿಂದ ಈ ದ್ವಿಪಥ ರಸ್ತೆಯ ಕಲ್ಸಂಕದಿಂದ ಅಂಬಾಗಿಲು ಕಡೆಗೆ ಹೋಗುವ ರಸ್ತೆಯಲ್ಲಿ ಕಲ್ಸಂಕ ಜಂಕ್ಷನ್‌ನಿಂದ ಗುಂಡಿಬೈಲು ಮುಖ್ಯ ರಸ್ತೆ ಜಂಕ್ಷನ್ (ರಸಿಕ ಬಾರ್) ತನಕ ವಾಹನ ಸಂಚಾರವನ್ನು ಜು.17ರಿಂದ 22ರವರೆಗೆ ನಿಷೇಧಿಸಿ, ಅಂಬಾಗಿಲಿನಿಂದ ಕಲ್ಸಂಕಕ್ಕೆ ಬರುವ ರಸ್ತೆಯಲ್ಲಿ ವಾಹನಗಳನ್ನು ದ್ವಿಮುಖವಾಗಿ ಸಂಚರಿಸುವಂತೆ ಅವಕಾಶ ಮಾಡಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸು ವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News