ನಾಪತ್ತೆಯಾಗಿದ್ದ ಯುವಕ ಆತ್ಮಹತ್ಯೆ

Update: 2019-07-16 16:20 GMT

ಪುತ್ತೂರು: ಕಳೆದ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ಮಂಗಳವಾರ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರು ಗುಂಡಿಗದ್ದೆ ನಿವಾಸಿ ನಾರಾಯಣ ಗೌಡ ಎಂಬವರ ಪುತ್ರ ಸುರೇಶ್(35) ಆತ್ಮಹತ್ಯೆ ಮಾಡಿಕೊಂಡ ಯುವಕ.

ಕಳೆದ ರವಿವಾರ ಬೆಳಗ್ಗೆ ಸುರೇಶ್ ಅವರು ಸಂಟ್ಯಾರಿನಲ್ಲಿರುವ ತನ್ನ ಚಿಕ್ಕಪ್ಪ ಚಿದಾನಂದ ಅವರ ಮನೆಯಲ್ಲಿದ್ದ ವೇಳೆ ಮನೆಯವರು  ಸುರೇಶ್ ಅವರ ತಂದೆ ನಾರಾಯಣ ಗೌಡ ಅವರು ನಿಧನರಾಗಿರುವ ವಿಚಾರವನ್ನು ಕರೆ ಮಾಡಿ ತಿಳಿಸಿದ್ದರು. ಈ ವಿಷಯ ತಿಳಿದ ಬೆನ್ನಲ್ಲೇ ತನ್ನಲ್ಲಿದ್ದ ಎರಡು ಮೊಬೈಲ್‍ಗಳ ಪೈಕಿ ಒಂದನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ ಸುರೇಶ್ ಅವರು ಆ ಬಳಿಕ ನಾಪತ್ತೆಯಾಗಿದ್ದರು.

ತನ್ನ ತಂದೆಯ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಆಗಮಿಸದೆ ಸುರೇಶ್ ನಾಪತ್ತೆಯಾಗಿರುವ ಬಗ್ಗೆ ಸೋಮವಾರ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿತ್ತು. ಸಂಪ್ಯ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.

ನಾಪತ್ತೆಯಾಗಿದ್ದ ಸುರೇಶ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ಕುರಿಯ ಗ್ರಾಮದ ಮಲಾರ್ ಎಂಬಲ್ಲಿರುವ ವಿಠಲ ರೈ ಎಂಬವರಿಗೆ ಸೇರಿದ ಜಮೀನಿನ ಗುಡ್ಡೆಯಲ್ಲಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುರೇಶ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಸಂಪ್ಯ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News