ಉಡುಪಿ: ಭುಜಂಗ ಪಾರ್ಕ್ ಅಭಿವೃದ್ಧಿಗೆ ಒಂದು ಕೋಟಿ ರೂ.

Update: 2019-07-16 17:15 GMT

ಉಡುಪಿ, ಜು.16: ಉಡುಪಿ ಅಜ್ಜರಕಾಡು ಬಳಿಯ ಭುಜಂಗ ಪಾರ್ಕ್‌ನ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ಹಾಗೂ ಪರ್ಯಾಯ ಶ್ರೀಕೃಷ್ಣ ಮಠ ದಲ್ಲಿರುವ ಯಾತ್ರಿ ನಿವಾಸ ಕಾಮಗಾರಿಗೆ 2 ಕೋಟಿ ರೂ.ಅನುದಾನ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಈ ಬಾರಿಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾವಾರು ಹಾಗೂ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಅನುದಾನದಲ್ಲಿ ಶಾಸಕರ ಶಿಫಾರಸ್ಸಿನಂತೆ ಈ ಎರಡು ಯೋಜನೆಗಳಿಗೆ ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News